ಶಿವಮೊಗ್ಗ ನಾಡಹಬ್ಬ ದಸರಾದ ಅಂಗವಾಗಿ ಶಿವಮೊಗ್ಗದ ಅಂಬೇಡ್ಕರ್ ಭವನ ಆವರಣದಲ್ಲಿ ಆಯೋಜಿಸಲಾಗಿದ್ದ ಛಾಯಾಚಿತ್ರ-ಕ್ಯಾಮೆರಾ ಪ್ರದರ್ಶನವನ್ನು ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಉದ್ಘಾಟಿಸಿದರು.ಚಿತ್ರಗಳನ್ನು ದಾಖಲಿಸುವ, ಶೇಖರಿಸುವ ಮತ್ತು ಇನ್ನೊಂದು ಕಡೆಗೆ ವರ್ಗಾಯಿಸಲು ಸಹಾಯ ಮಾಡುವ ಕ್ಯಾಮೆರಾಗಳ ಆವಿಷ್ಕಾರಗಳ ಕುರಿತು ತಜ್ಞರಿಂದ ಮಾಹಿತಿಯನ್ನು ಪಡೆದರು.

ಈ ಸಂದರ್ಭದಲ್ಲಿ ಚಲನಚಿತ್ರ ಸಾಹಿತಿಗಳಾದ ಡಾ. ವಿ ನಾಗೇಂದ್ರ ಪ್ರಸಾದ್, ಶಿವಮೊಗ್ಗದ  ಛಾಯಾಗ್ರಾಹಕರಾದ ಶಿವಮೊಗ್ಗ ನಂದನ್, ಶಿವಮೊಗ್ಗ ನಾಗರಾಜ್, ಪ್ರದೀಪ್ ಕುಮಾರ್, ವಾಸುಕಿ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *