“ಆರೋಗ್ಯಕರ ಸಮಾಜದ ಶಕ್ತಿಯಾದ ಪೌರಕಾರ್ಮಿಕರೊಂದಿಗೆ ದಸರಾ”

ಪೌರ ಕಾರ್ಮಿಕರ ದಸರಾವನ್ನು ಪಾಲಿಕೆಯ ರಾಜ್ಯಾಧ್ಯಕ್ಷ ಅಮೃತ್ ರಾಜ್ ಉದ್ಘಾಟಿಸಿದರು.ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿನಿತ್ಯ ಚಳಿ ಮಳೆ ಗಾಳಿಯನ್ನದೆ ನಗರದ ಸ್ವಚ್ಛತೆಗಾಗಿ ದುಡಿಯುವವರೇ ನಮ್ಮ ಪೌರ ಕಾರ್ಮಿಕರು ಎಂದರು.

ನಗರ ಶಾಸಕ ಚನ್ನಬಸಪ್ಪ ಪೌರ ಕಾರ್ಮಿಕರ ದಸರಾ ಕಾರ್ಯಕ್ರಮದಲ್ಲಿ ಕರಾವಳಿಯ ವಿಶೇಷ ಪೀಲಿ ನೃತ್ಯಕ್ಕೆ ಹೆಜ್ಜೆ ಹಾಕಿದರು.ನಂತರ ಮಾತನಾಡಿದ ಅವರು ಪೌರ ಕಾರ್ಮಿಕರನ್ನು ಗುರುತಿಸಿ ನೈತಿಕ ಶಕ್ತಿ ತುಂಬಲು ಮತ್ತು ಅವರಿಗೆ ಒಂದು ವೇದಿಕೆಯನ್ನು ಕಲ್ಪಿಸುವ ಆಲೋಚನೆಯೊಂದಿಗೆ ಇಂದು ರಾಜ್ಯದಲ್ಲಿ ಪ್ರಪ್ರಥಮವಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಹಮ್ಮಿಕೊಂಡಿದ್ದ ‘ಪೌರ ಕಾರ್ಮಿಕರ ದಸರಾ’ ಕಾರ್ಯಕ್ರಮವನ್ನು ಶಿವಮೊಗ್ಗ ಯಶಸ್ವಿಯಾಗಲಿ ಎಂದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *