ಟೋಕಿಯೋ- 2021 ಒಲಿಂಪಿಕ್ಸ್ ನಲ್ಲಿ ಜಾವಲಿನ್ ಥ್ರೋನಲ್ಲಿ ಭಾರತದಕ್ಕೆ ಚಿನ್ನದ ಪದಕ ಗೆಲ್ಲುವ ಮೂಲಕ ಶೂಟರ್ ಅಭಿನವ್ ಬಿಂದ್ರಾ ನಂತರ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಹಿರಿಮೆಗೆ ಭಾಜನರಾಗಿದ್ದಾರೆ. ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 140 ಕೋಟಿ ಭಾರತೀಯರ ಹಿರಿಮೆಯನ್ನು ಎತ್ತಿಡಿದ ಸಾಧನೆಯನ್ನು ಅತಿ ಸಂತಸದಿಂದ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯು ನಗರದ ಶಿವಪ್ಪನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಾಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್ , ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹೆಚ್.ಪಿ.ಗಿರೀಶ್ , ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಲೋಕೇಶ್ , ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಎಸ್ ಕುಮರೇಶ್ , ಮುಖಂಡರಾದ ಟಿ.ವಿ. ರಂಜಿತ್ , ಮಧುಸೂದನ್ ಉಪ್ಪಾರ್ ಕೇರಿ, ಪದಾಧಿಕಾರಿಗಳಾದ ಎಂ.ರಾಹುಲ್ , ಪುಷ್ಪಕ್ ಕುಮಾರ್ , ಅರುಣ್ ನವುಲೆ , ಕೆ ಎಲ್ .ಪವನ್ , ರಾಕೇಶ್ , ವೆಂಕಟೇಶ್ ಕಲ್ಲೂರು , ವಿನಯ್ , ರಾಹುಲ್ ಸೀಗೆಹಟ್ಟಿ , ಚಿನ್ಮಯ್ , ಇರ್ಫಾನ್ , ಸುಹಾಸ್ ಗೌಡ ಇತರರು ಇದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ