ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ರವರ ಯಶಸ್ವಿ ಶಸ್ತ್ರ ಚಿಕಿತ್ಸೆಗಾಗಿ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಸನ್ನಿಾರದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಯಿತು.

ಚಲನಚಿತ್ರ ನಟರಾದ ಡಾಕ್ಟರ್ ಶಿವರಾಜ್ ಕುಮಾರ್ ರವರ ಅನಾರೋಗ್ಯದ ನಿಮಿತ್ತ ಅಮೆರಿಕದ ಮಿಯಾಮಿಯಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಗುಣಮುಖರಾಗಿ ಆಗಮಿಸಲಿ ಎಂದು ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಸನ್ನಿದಾನದಲ್ಲಿ ಮಹಾ ಮೃತ್ಯುಂಜಯ ಹೋಮ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಅಭಿಮಾನಿ ಬಳಗದಿಂದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಸಿಗಂದೂರ್ ಚೌಡೇಶ್ವರಿ ದೇವಸ್ಥಾನದ ಕಾರ್ಯದರ್ಶಿಗಳಾದ ರವಿ ಕುಮಾರ್ ರವರು kpcc ಓಬಿಸಿ ಸಂಯೋಜಕ ಜಿ.ಡಿ ಮಂಜುನಾಥ್ , ಮಸ್ಗಾರ್ ರಾಜಪ್ಪ, ಎಂ.ಬಿ ರವಿಕುಮಾರ್ ಪುರದಾಳ್ ರಘು, ಚೇತನ್, ಸಂದೇಶ್ ಇನ್ನಿತರರು ಹಾಜರಿದ್ದರು.