ದಿನಾಂಕ :08-08-2021 ರ ಭಾನುವಾರದಂದು ಸುಮಾರು ಬೆಳಗ್ಗೆ 10:30 ಸಮಯ ಶಿವಮೊಗ್ಗದ ಬಿ .ಎಚ್ ರಸ್ತೆಯಲ್ಲಿರುವ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಬಿಜೆಪಿ ನಗರ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಬಹಿರಂಗವಾಗಿ ತಮ್ಮ ಕಾರ್ಯಕರ್ತರಿಗೆ ಪಕ್ಕದ ರಾಜ್ಯ ಕೇರಳದಲ್ಲಿ ರಾಷ್ಟ್ರೀಯ ಸೇವಾ ಸಂಘ ಆರಂಭ ಮಾಡಲು ಯಾವುದಾದರೂ ಕಾರ್ಯಕರ್ತ ಹೋದರೆ ಕೊಲೆಗಳನ್ನು ಮಾಡುತ್ತಿದ್ದರು ವಾಪಾಸ್ ಹೊಡೆಯಲಿಕ್ಕೆ ಶಕ್ತಿ ನಮಗೆ ಇರಲಿಲ್ಲ. ಇವತ್ತು ಲಕ್ಷ ಲಕ್ಷ ಜನ ಭಾರತೀಯ ಜನತಾ ಪಾರ್ಟಿಯ ಜೊತೆ ಇದ್ದಾರೆ ಪ್ರಪಂಚದಲ್ಲಿ ಈಗ ಬೆಳೆದಿದೆ ಯಾವುದೇ ಮೂಲೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಮೈ ಮುಟ್ಟಿದರೆ ಇವತ್ತಿನ ತೀರ್ಮಾನ (Faced with same stick) ಯಾವುದರಲ್ಲಿ ಅದರಲ್ಲೇ ಹೊಡೆದು ಒಂದಕ್ಕೆ 2ತೆಗೆದುಬಿಡಿ ಹೇಳೋದು ಬೇಡ ಎಂಬುದಾಗಿ ಆಕ್ರೋಶ ಭರಿತವಾಗಿ ವಿರುದ್ಧ ಧ್ವನಿಯಲ್ಲಿ ತಮ್ಮ ಕಾರ್ಯಕರ್ತರಿಗೆ ಹೇಳಿರುತ್ತಾರೆ .ಜನರಿಂದ ಆಯ್ಕೆಯಾದ ಜನಪ್ರತಿನಿಧಿಯು ಜನರ ಆಶೋತ್ತರಗಳಿಗೆ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಆರೋಗ್ಯಕರ ಚಿಂತನೆ ಹಾಗೂ ಹೇಳಿಕೆಗಳನ್ನು ಸಂವಿಧಾನದ ಗಡಿಯಲ್ಲಿ ಮಾತನಾಡಬೇಕು ಆದರೆ ಕರ್ನಾಟಕ ರಾಜ್ಯದ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪನವರು ತಮ್ಮ ಭಾಷಣದಲ್ಲಿ ಗುಂಪುಗುಂಪುಗಳ ನಡುವೆ ಪರಸ್ಪರ ದ್ವೇಷದ ಕಿಡಿ ಹಚ್ಚಲು ಒಬ್ಬರನ್ನೊಬ್ಬರು ಕೊಲೆ ಮಾಡುವಂತೆ ಪ್ರಚೋದನಕಾರಿ ಭಾಷಣ ಮಾಡಿದ್ದು ಕಾನೂನಿಗೆ ಗೌರವ ಕೊಡದೆ ಅಮಾಯಕರ ದಾರಿ ತಪ್ಪಿಸುವ ಹೇಳಿಕೆಯು ಕಾನೂನಿನ ಉಲ್ಲಂಘನೆಯಾಗಿರುತ್ತದೆ ಇಂತಹ ಹೇಳಿಕೆಯಿಂದ ಸಮಾಜದಲ್ಲಿ ಜನರನ್ನ ಉದ್ರೇಕಿಸಿ ದೊಂಬಿ ಯಾಗ ಬೇಕೆಂಬ ಉದ್ದೇಶದಿಂದ ಹಾಗೂ ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡುವ ಹೇಳಿಕೆಯಾಗಿದ್ದು ತಾವುಗಳು ಸ್ವಯಂಪ್ರೇರಿತರಾಗಿ ಜವಾಬ್ದಾರಿ ಸ್ಥಾನದಲ್ಲಿದ್ದು ಪ್ರಚೋದನಕಾರಿ ಭಾಷಣ ಮಾಡಿದ ಶ್ರೀ ಕೆ .ಎಸ್ ಈಶ್ವರಪ್ಪನವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಈ ಮೂಲಕ ತಿಳಿಸಿದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ