M.ಶ್ರೀಕಾಂತ್ ಗೆ ಹುಟ್ಟುಹಬ್ಬದ ಶುಭಾಶಯಗಳು…

ಶ್ರೀ ಸ್ನೇಹಜೀವಿ ಗೆಳೆಯರ ಬಳಗ ವಿನೋಬನಗರ ಮತ್ತು ಎಂ ಶ್ರೀಕಾಂತ್ ಅಭಿಮಾನಿ ಬಳಗದ ವತಿಯಿಂದ ಕಲಿಯುಗ ಕರ್ಣ ಎಮ್ ಶ್ರೀಕಾಂತ್ ರವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ರಕ್ತದಾನ ಮತ್ತು ಇತರ ಸಮಾಜಮುಖಿ ಕೆಲಸಗಳು ಮಾಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು.ಈ ಶಿಬಿರದಲ್ಲಿ ಎಸ್ ಪಿ ಇವೆಂಟ್ಸ್ ಮಾಲೀಕರು ಪ್ರವೀಣ್ ಗಗನ್ ಶಿವು ಸೇರಿದಂತೆ ಹಲವರು ರಕ್ತದಾನ ಮಾಡಿದರು. ಮಾತೊಂದಡೆ ನಗರದ ಬಂಜಾರ ಕನ್ವೆನ್ಷನಲ್ ಹಾಲ್ ನಲ್ಲಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಹುಟ್ಟುಹಬ್ಬ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ನಾಗರಾಜ್ ಕಂಕರಿ ಮಾಜಿ ಉಪ ಮಹಾಪೌರರಾದ ಪಾಲಾಕ್ಷಿ. ಮಂಜುನಾಥ್ ಮೋಸ. ಸಂತೋಷ್ ಆರ್. ನವಲೆ ಮಂಜುನಾಥ್. ಗ್ಯಾರೆಂಟಿ ಅನುಷ್ಠಾನ ಸದಸ್ಯ ಬಸವರಾಜ್ ದಿವಾಕರ್ ವಿನಯ್ ತಾಂಡ್ಲೆ ದಾನೇಶ್ ಮುಂತಾದವರು ಭಾಗಿಯಾಗಿದ್ದರು.