CONGRATS DR.RAM PRASANA NAYAK…

ಶಿವಮೊಗ್ಗ ನಗರದ ಹಿರಿಯ ವೈದ್ಯರು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಡಾಕ್ಟರ್ ಎನ್. ಎಲ್. ನಾಯಕ್ ಇವರ ಜ್ಯೇಷ್ಠ ಪುತ್ರ ಡಾಕ್ಟರ್ ರಾಮಪ್ರಸನ್ನ ನಾಯಕ್ ಇವರು ಮಹಾರಾಷ್ಟ್ರದ ಶಿರಡಿಯ ಶ್ರೀ ಸಾಯಿನಾಥ ಹಾಸ್ಪಿಟಲ್ ಇಲ್ಲಿ ಕಳೆದ 23 ವರ್ಷಗಳಿಂದ ಕನ್ಸಲ್ಟೆಂಟ್ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಸುದೀರ್ಘ ಸೇವಾ ಅವಧಿಯಲ್ಲಿ ಡಾ.ರಾಮ್ ಪ್ರಸನ್ನ ಇವರು 2,72,690 ರೋಗಿಗಳಿಗೆ ಚಿಕಿತ್ಸೆ ನೀಡಿ ಅವರಲ್ಲಿ 59637 ರೋಗಿಗಳಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿರುತ್ತಾರೆ.
ಇವರ ಈ ಶ್ರದ್ಧೆ, ನಿಷ್ಠೆ, ಬದ್ಧತೆ ಮತ್ತು ಅವಿರತ ವೈದ್ಯಕೀಯ ಸೇವೆಯನ್ನು
WORLD BOOK OF RECORDS, LONDON
ಇವರು ಗುರುತಿಸಿ
ಪ್ರಶಂಸಾ ಪತ್ರವನ್ನು ನೀಡಿರುತ್ತಾರೆ.
ಇವರ ಈ ಅದ್ಭುತವಾದ ಸಾಧನೆ ನಮ್ಮ ಸಮಾಜಕ್ಕೆ ಅತ್ಯಂತ ಹೆಮ್ಮೆಯ ಮತ್ತು ಗೌರವದ ಪ್ರತೀಕವಾಗಿದೆ.
ಡಾಕ್ಟರ್ ರಾಮಪ್ರಸನ್ನ ನಾಯಕ್ ಅವರ ಈ ಪ್ರಶಂಸನೀಯ ಸಾಧನೆಗೆ ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು.