ಶಿವಮೊಗ್ಗ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳನ್ನೊಳಗೊಂಡ ತಂಡವು ರೂಟ್ ಮಾರ್ಚ್ ಅನ್ನು ಹಮ್ಮಿಕೊಂಡಿದ್ದು.

ಶಿವಮೊಗ್ಗ ನಗರದ ಮಿಳ್ಳಘಟ್ದಿಂದ ಪ್ರಾರಂಭಿಸಿ ಅಣ್ಣಾ ನಗರ, ಮಂಜುನಾಥ ಬಡಾವಣೆ, ಬಸ್ ಡಿಪೋ, ಆರ್‌ಎಂಎಲ್ ನಗರ, ಮಾರ್ನಾಮಿ ಬೈಲು, ಟೆಂಪೋ ಸ್ಟಾಂಡ್, ಬಸ್ ನಿಲ್ದಾಣ ದಿಂದ ಬುದ್ಧನಗರಕ್ಕೆ ಬಂದು ರೂಟ್ ಮಾರ್ಚನ್ನು ಮುಕ್ತಾಯ ಮಾಡಲಾಯಿತು.

ಸದರಿ ರೂಟ್ ಮಾರ್ಚ್ ನಲ್ಲಿ ವಿಶೇಷ ಕಾರ್ಯಪಡೆಯ ಪೊಲೀಸ್‌ ಅಧಿಕಾರಿ ಸಿಬ್ಬಂಧಿಗಳು ಹಾಗೂ ಶಿವಮೊಗ್ಗ ನಗರದ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.