ಅಬಕಾರಿ ಸಚಿವರು, ಆಯುಕ್ತರು ಹಾಗೂ ಜಂಟಿ ಆಯುಕ್ತರು ಮಂಗಳೂರು ವಿಭಾಗದರವರ ಆದೇಶದ ಮೇರೆಗೆ ಹಾಗೂ ಶ್ರೀ ಅಜಿತ್ ಕುಮಾರ್. ಮಂಜುನಾಥ್ ಜಿ, ಬಿ. ಮತ್ತು ಹಾಲಾನಾಯ್ಕ ಎನ್, ಶ್ರೀ ದೀಪಕ್. ಶಿವಮೊಗ್ಗ ತಾಲ್ಲೂಕು ಅಗಸವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸೂರು ಗ್ರಾಮದ ಸರ್ವೇ ನಂ. 167 ರಲ್ಲಿ ನಾಗರಾಜ್ ಬಿನ್ ರಂಗಪ್ಪರವರು ಸಾಗುವಳಿ ಮಾಡುತ್ತಿರುವ ಅಡಿಕೆ ಬಾಳೆ ಮಿಶ್ರಿತ ತೋಟದಲ್ಲಿ ಆತನ ಮಗನಾದ ಮುನಿರಂಗೆಗೌಡ ಅಲಿಯಾಸ್ ಕಿರಣ ಬಿನ್ ನಾಗರಾಜ್ ರವರು ಅಕ್ರಮವಾಗಿ 24 ಗಾಂಜಾ ಗಿಡಗಳನ್ನು ಬೆಳೆದಿರುವುದು ಪತ್ತೆಯಾಗಿದ್ದು ಸದರಿ ಕೃತ್ಯವು ಎನ್.ಡಿ.ಪಿ.ಎಸ್ ಕಾಯ್ದೆ 1985 ರ ಕಲಂ 8(ಬಿ) ರೀತ್ಯಾ ಉಲ್ಲಂಘನೆ ಹಾಗೂ ಇದೇ ಕಾಯ್ದೆಯ ಕಲಂ 20(ಎ) ರೀತ್ಯಾ ಶಿಕ್ಷಾರ್ಹ ಅಪರಾಧವಾಗಿರುವ ಕಾರಣ ಆರೋಪಿಯನ್ನು ದಸ್ತಗಿರಿ ಮಾಡಿ ಮೊಕದ್ದಮೆಯನ್ನು ದಾಖಲಿಸಲಾಯಿತು. ಮುದ್ದೆಮಾಲನ್ನು ನಿಯಾಮಾನುಸಾರ ಜಪ್ತು ಪಡಿಸಿಕೊಂಡು, ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153