ಭದ್ರಾವತಿಯ ಪೇಪರ್ ಟೌನ್ ಕಡೆಯಿಂದ ಕೂಲಿ ಬ್ಲಾಕ್ ಶೆಡ್ ಕಡೆಗೆ ಕಾರಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದರು.ಗಾಂಜಾ ಸಾಗಿಸುತ್ತಿದ್ದ ಡ್ಯಾನಿ, ಕುರ ಚರಣ್ ರಾಜ್ ಯಾದವ್, ಆದಿಲ್ ಬಾಷಾ, ಎಂಬುವವರನ್ನು ಬಂಧಿಸಿದ್ದಾರೆ. ಪೊಲೀಸರು 11.440 ಕೆಜಿ ಗಾಂಜಾ ಮತ್ತು 1.50 ಲಕ್ಷ ರೂ ಮೌಲ್ಯದ ಕಾರನ್ನು ವಶಕ್ಕೆ ಪಡೆದುಕೊಂಡರು.ಈ ಪ್ರಕರಣವು ನ್ಯೂಟೌನ್ ಠಾಣೆಯಲ್ಲಿ ದಾಖಲಾಗಿದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ