ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್ಎಸ್ಸುಂದರೇಶ್ ರವರ ಅಧ್ಯಕ್ಷತೆಯಲ್ಲಿ ಕುಂಸಿ ಯ #ವೀರಭದ್ರಸ್ವಾಮಿದೇವಸ್ಥಾನದ ಹತ್ತಿರದ ಸಮುದಾಯ ಭವನದಲ್ಲಿ ಜಿಲ್ಲಾಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ನ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪ್ರಮುಖರ ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮುಂಬರುವ ಚುನಾವಣೆ ಬಗ್ಗೆ ಕಾರ್ಯ ರೂಪರೇಶಗಳ ಬಗ್ಗೆ ಚರ್ಚೆ ನಡೆಯಿತು,ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ತಂದ ಹಲವು ಯೋಜನೆಗಳನ್ನು ತಿಳಿಸಲಾಯಿತು. ಈ ಮಹತ್ವದ ಪೂರ್ವಭಾವಿ ಸಭೆಯಲ್ಲಿ ಜನಪ್ರಿಯ ಮಾಜಿ ಸಚಿವರು,ಹಿರಿಯರು ಆದ ಶ್ರೀ #ಕಾಗೋಡು ತಿಮ್ಮಪ್ಪ ನವರು, ,ಶಾಂತವೀರಪ್ಪ ಗೌಡ್ರು, ಕಲಾಗೋಡು ರತ್ನಾಕರ್,ಬ್ಲಾಕ್ ಅಧ್ಯಕ್ಷರಾದ ಬಿ ಅರ್ ನಾಗರಾಜ್, ರಾಮಣ್ಣ, ಡಾll ಶ್ರೀನಿವಾಸ್ ಕರಿಯಣ್ಣ, ಅರ್ ಎಂ ಮಂಜುನಾಥ್ ಗೌಡರು,ಗೋಪಾಲಕೃಷ್ಣ ಬೇಳೂರು, ಎಸ್.ರವಿಕುಮಾರ್, ದೇವಿಕುಮಾರ್,ವಿಜಯ್ ಕುಮಾರ್, ಜಿ ಪಲ್ಲವಿ, ಶಾಂತ ವೀರ್ ನಾಯಕ್,ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷರಾದ ಅಬ್ದುಲ್ ರೆಹ್ಮಾನ್ (ಅನ್ನು) ಹಾಗೂ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಎನ್ ಡಿ ಪ್ರವೀಣ್ ಕುಮಾರ್, ಇನ್ನೂ ಹಲವಾರು ಮುಖಂಡರುಗಳು,ಗ್ರಾಮದ ಪ್ರಮುಖರು,ಕಾರ್ಯಕರ್ತರು, ಭಾಗವಹಿಸಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153