ನಮ್ಮ ಭಾರತ ದೇಶದಲ್ಲಿ ಸರಣಿ ರೂಪದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಬರ್ಬರ ಅತ್ಯಾಚಾರ ಕೊಲೆ ಮತ್ತು ಗುಂಪು ಹತ್ಯೆ ಮೊಬ್ ಲಿಂಚಿಂಗ್ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಿ ಗಲ್ಲುಶಿಕ್ಷೆ ವಿಧಿಸಿ. ದಿನಾಂಕ ಆಗಸ್ಟ್ 26 ರಂದು ದೆಹಲಿಯ ಸಂಗಮ್ ವಿಹಾರ್ ನಲ್ಲಿ 21 ವರ್ಷದ ದೆಹಲಿ ಸಿವಿಲ್ ಡಿಫೆನ್ಸ್ (ಡಿಸಿಡಿ) ಉದ್ಯೋಗಿಯನ್ನು ಅಪಹರಿಸಿ, ಅತ್ಯಾಚಾರ ಮತ್ತು ಕ್ರೂರವಾಗಿ ಕೊಲೆ ಮಾಡಲಾಗಿದೆ. ಸಂತ್ರಸ್ತೆಯಾದ ಸಬಿಯಾ (ಹೆಸರು ಬದಲಿಸಲಾಗಿದೆ) 26 ರಂದು ಸಂಜೆ ತನ್ನ ಕೆಲಸದ ಸ್ಥಳದಿಂದ ಅಪಹರಿಸಿ ಫರೀದಾಬಾದ್‌ಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ಮಾಡಿ ದೇಹದ ಮೇಲೆ ಚಾಕುವಿನಿಂದ ಇರಿದಿದ್ದು, ಗುಪ್ತಾಂಗಕ್ಕೆ 52 ಐವತ್ತು ಎರಡು ಬಾರಿ ಚಾಕುವಿನಿಂದ ಇರಿದು ಆಕೆಯ ದೇಹವನ್ನು ವಿರೂಪಗೊಳಿಸಲಾಯಿತು ಮತ್ತು ಆಕೆಯ ಸ್ತನಗಳನ್ನು ಕತ್ತರಿಸಲಾಗಿದೆ ಮತ್ತು ಕುತ್ತಿಗೆಯನ್ನು ಕುಯ್ದು ವಿಕೃತವಾಗಿ ವರಣೆ ಮಾಡಲಾಗದ ರೀತಿಯಲ್ಲಿ ಇರಿದು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಈ ಹತ್ಯೆ ಪ್ರಕರಣವನ್ನು ತಾರತಮ್ಯ ಮಾಡಿ ಜಾತಿಯನ್ನು ಹುಡುಕಿ ಜಾತಿ ಆಧಾರದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ನಿರ್ಲಕ್ಷ ತೂರಲಾಗುತ್ತಿದೆ ಈ ಪ್ರಕರಣವನ್ನು ಸಿ.ಬಿ.ಐ.ಗೆ ಒಪ್ಪಿಸಿ ನಿಪಕ್ಷವಾಗಿ ಸೂಕ್ಷ್ಮವಾಗಿ ನ್ಯಾಯಯುತವಾಗಿ ತನಿಖೆ ಮಾಡಿ ಆರೋಪಿಗಳಿಗೆ ಅನುಕಂಪ ತೋರದೆ ಉಗ್ರವಾಗಿ ನೈಸರ್ಗಿಕ ನ್ಯಾಯದಡಿಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಗಲ್ಲಿಗೇರಿಸಬೇಕು ಎಂದು ಕೇಳಿಕೊಳ್ಳುತ್ತಾ ಅಂದಿನ ನಿರ್ಭಯ ನಂತರ ಸೌಜನ್ಯ ದಾನಮ್ಮ ಆಸಿಫಾ ಪ್ರಿಯಾಂಕ ಹಾಗೂ ಪುಟ್ಟ ಪುಟ್ಟ ಹೆಣ್ಣುಮಕ್ಕಳು ಬಾಲಕಿಯರ ವಿದ್ಯಾರ್ಥಿನಿಯರ ಮೇಲೆಯೂ ಸಹ ಲೈಂಗಿಕ ಶೋಷಣೆ ಹತ್ಯೆ ಅತ್ಯಾಚಾರ ದೌರ್ಜನ್ಯ ನಿರಂತರವಾಗಿ ನಡೆಯುತ್ತಿರುವುದು ಖಂಡನೀಯ ಸರ್ಕಾರಗಳು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಲ್ಲಿ ವಿಫಲರಾಗುತ್ತಿರುವುದು ವಿಪರ್ಯಾಸ ದೇಶದಲ್ಲಿ ಮಹಿಳೆಯರು ಸ್ವಾತಂತ್ರರಾಗಿ ಜೀವಿಸಿದೆ ಭಯದಲ್ಲಿ ಹೆದರುವಂತಹ ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ನಮ್ಮ ಭಾರತದಲ್ಲಿ ಹೆಣ್ಣನ್ನು ದೇವಿ ಮಾತೆ ದುರ್ಗೆ ಲಕ್ಷ್ಮಿ ಸರಸ್ವತಿ ಕಾಳಿ ಸೀತೆ ನಾನಾ ಸ್ವರೂಪದಲ್ಲಿ ಪೂಜಿಸುವಂತಹ ಮತ್ತು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಹೋಗುವಂತಹ ನಮ್ಮ ಭಾರತದಲ್ಲಿ ವಿಕೃತವಾಗಿ ವರಣೆ ಮಾಡಲಾಗದ ರೀತಿಯಲ್ಲಿ ಇರಿದು ಅತ್ಯಾಚಾರ ಮಾಡಿ ಸುಟ್ಟು ಕೊಲೆ ಮಾಡಲಾಗುತ್ತಿದೆ ಹಾಗೂ ನಗರ ರಾಜ್ಯ ದೇಶದ ಮಹಿಳೆಯರು ಅಮಾಯಕರು ಎಷ್ಟು ಸುರಕ್ಷಿತವಾಗಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ ಭಾರತ ದೇಶವು ಜಾತ್ಯತೀತ ರಾಷ್ಟ್ರವಾಗಿದ್ದು ಒಂದು ಧರ್ಮದ ಕೆಲ ಜನರು ಇನ್ನೊಂದು ಧರ್ಮದ ಮೇಲೆ ಸವಾರಿ ಮಾಡಲು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸಲು ಶೋಷಣೆ ಮಾಡಲು ಹೊರಟಿದ್ದಾರೆ ಇದು ಭಾರತದ ಸಂವಿಧಾನದಲ್ಲಿ ಅವಕಾಶವಿಲ್ಲ ಇಲ್ಲಿ ಬೇರೆಬೇರೆ ಧರ್ಮದ ವಿವಿಧ ಜಾತಿ ಜನಾಂಗದವರು ವಾಸಿಸುತ್ತಿದ್ದು ಅಲ್ಲದೆ ಈ ದೇಶದ ಸಂವಿಧಾನಬದ್ಧವಾಗಿ ಜೀವನ ನಡೆಸುತ್ತಿದ್ದಾರೆ ಇಂತಹ ನಮ್ಮ ದೇಶದಲ್ಲಿ ಕೆಲ ಜಾತಿವಾದಿಗಳು ಕೆಲ ಕೋಮುವಾದಿ ಸಂಘಟನೆಗಳು ಮತ್ತು ಕೆಲವು ಕೋಮುವಾದಿ ರಾಜಕಾರಣಿಗಳು ಕಾನೂನಿನ ಹಾಗೂ ಸಂವಿಧಾನ ಅರಿವುವಿದ್ದು ಪ್ರಮಾಣವಚನ ಸ್ವೀಕರಿಸಿ ಪ್ರಮಾಣವಚನದ ಕಾನೂನು ಸಂವಿಧಾನ ವಿರುದ್ಧವಾಗಿ ಅವಿವೇಕಿ ಗಳಂತೆ ಅಮಾಯಕ ಜನರ ಮೇಲೆ ಬರ್ಬರವಾಗಿ ಗುಂಪು ಹತ್ಯೆ ಅತ್ಯಾಚಾರ ಮಾಡಲು ಪ್ರಚೋದನೆ ನೀಡುವ ನಿಟ್ಟಿನಲ್ಲಿ ತಮ್ಮ ಭಾಷಣ ಮಾಡುತ್ತಿದ್ದಾರೆ ಅದರ ಪರಿಣಾಮವೇ ಸಮಾಜ ಕುಲವೇ ತಲೆತಗ್ಗಿಸುವಂತಹ ಸಂಗತಿಯಾಗಿದೆ ದಿನೆದಿನೆ ಅಲ್ಪಸಂಖ್ಯಾತರ ಮೇಲೆ ಇಂತಹ ಅನೇಕ ಗುಂಪು ಹಲ್ಲೆ ಹತ್ಯೆಗಳು ಅತ್ಯಾಚಾರಗಳು ನಮ್ಮ ಭಾರತದಲ್ಲಿ ಪ್ರತಿನಿತ್ಯ ಧರ್ಮದ ಆಧಾರದ ಮೇಲೆ ನಡೆಯುತ್ತಲೇ ಇವೆ ಕಳೆದ ಏಳು ವರ್ಷಗಳಲ್ಲಿ ಇಂತಹ ಘಟನೆಗಳಲ್ಲಿ ಹೆಚ್ಚಳವಾಗಿದ್ದು ನಮ್ಮ ರಾಷ್ಟ್ರದ ಗೌರವ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಗ್ಗಿದೆ ಬೀದಿ ಭಿಕ್ಷುಕ ನಿಂದ ಹಿಡಿದು ಸರ್ಕಾರದ ಅತ್ಯುತ್ತಮ ಉನ್ನತ ಹುದ್ದೆಗಳಲ್ಲಿ ಇರುವಂತಹ ಮುಸ್ಲಿಂ ಅಲ್ಪಸಂಖ್ಯಾತರ ಧರ್ಮದ ಆಧಾರದ ಶೋಷಣೆ ಚಿತ್ರಹಿಂಸೆ ಕೆಲವು ಕೋಮುವಾದಿ ಸಂಘಟನೆಗಳು ರಾಜಕಾರಣಿಗಳು ನೀಡುತ್ತಿದ್ದಾರೆ ಹಾಗೂ ಕೆಲವು ರಾಜಕಾರಣಿಗಳು ಕೋಮುವಾದಿಗಳನ್ನು ಜೈಲಿನಿಂದ ಬಿಡಿಸಿ ಸನ್ಮಾನಿಸಿ ಕೋಮುವಾದಿಗಳ ಬೆನ್ನೆಲುಬು ಆಗಿರುತ್ತಾರೆ ಈ ಎಲ್ಲ ಪ್ರಕರಣಗಳಲ್ಲೂ ಭಾರತ್ ಮಾತಾ ಕೀ ಜೈ. ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಸಂಘಟನೆಗಳ ಕಾರ್ಯಕರ್ತರು ಮುಖ್ಯ ಪಾತ್ರ ವಹಿಸಿದ್ದು ಅವರ ಮಾನಸಿಕ ಸ್ಥಿತಿ ಹಾಗೂ ದೇಶವನ್ನು ಜಾತಿಯ ಹೆಸರಿನಲ್ಲಿ ಒಡೆದು ಆಳುವ ನೀತಿಯ ನಮ್ಮ ದೇಶದ ಶಾಂತಿ ಹಾಗೂ ಸೌಹಾರ್ದತೆಗೆ ಧಕ್ಕೆ ಉಂಟಾಗುತ್ತಿದೆ ನಮ್ಮ ದೇಶದ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ಭಾರತೀಯರನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ನಾಗರಿಕನಾಗಿರುತ್ತದೆ ಮಹಿಳಾ ಮತ್ತು ಮಾನವ ಹಕ್ಕುಗಳ ಬಗ್ಗೆ ಕಾಳಜಿಯುಳುವರ ಜಾಣ ಮೌನ ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿರುವ ವಿದ್ಯಮಾನಗಳ ಭವಿಷ್ಯದ ಭಾರತದ ಕಲ್ಪನೆ ಮಾಡಿಕೊಂಡರೆ ನಿದ್ರೆಯೂ ಸಹ ಬರದ ಹಾಗಾಗಿದೆ ಇಂತಹ ದುಷ್ಟ ಶಕ್ತಿಯಿಂದ ಪಾರಾಗಲು ಜಾತ್ಯತೀತ ಭಾರತೀಯರದ 140 ಕೋಟಿ ಜನಸಂಖ್ಯೆ ಇರುವಂತಹ ನಮ್ಮ ದೇಶದಲ್ಲಿ 00.1 ರಷ್ಟು ಕೋಮುವಾದಿಗಳನ್ನು ಸಂವಿಧಾನದ ಅಡಿಯಲ್ಲಿ ಕಡಿವಾಣ ಹಾಕಲು ತಕ್ಷಣವೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರದೆ ಸೂಕ್ತವಾದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಆರೋಪಿಗಳಿಗೆ ಜಾಮೀನು ರಹಿತ non-bailable ಗಲ್ಲು ಶಿಕ್ಷೆ ಅಥವಾ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತಹ ಕಾನೂನು ಜಾರಿಗೊಳಿಸಿ ದೆಹಲಿಯ ಸಂಗಮ್ ವಿಹಾರ್ ನಲ್ಲಿ 21 ವರ್ಷದ ದೆಹಲಿ ಸಿವಿಲ್ ಡಿಫೆನ್ಸ್ (ಡಿಸಿಡಿ) ಉದ್ಯೋಗಿಯ ಅತ್ಯಾಚಾರ ಮತ್ತು ಕ್ರೂರವಾಗಿ ಕೊಲೆಯಾದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಭಾರತದ ಹೆಣ್ಣುಮಗಳಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿ ಒತ್ತಾಯಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ರಿಯಾಜ್ ಅಹಮದ್ ,ಸೈಯದ್ ಬಶೀರ್ ,ಮೊಹಮ್ಮದ್ ಅಯೂಬ್ ,ಸೈಯದ್ ಸಮೀವುಲ್ಲಾ,ಅಲ್ತಾಫ್ ಅಹ್ಮದ್ ,ತಿಮ್ಮರೆಡ್ಡಿ. ಎಹಸಸ್ ಎ ನಯಬ್ ,ಮುಮ್ತಾಜ್ ಖಾನಂ ,ಯಾಸ್ಮಿನ್ , ವಾಹಿದ ,ಸಲ್ಮ ಯಸ್ಮಿನ್ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153