ರಾಜ್ಯದಲ್ಲಿ ರಕ್ತದ ಕೊರತೆ ಕಂಡು ಬಾರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಪ್ರಯುಕ್ತ ದಿನಾಂಕ 17-09-2021 ರಂದು ರಾಜ್ಯದಾದ್ಯಂತ ರಕ್ತ ಕೇಂದ್ರಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂಬಂದ ಸ್ಥಳೀಯ ಹಲವು ಸರ್ಕಾರಿ, ಸರ್ಕಾರೇತರ, ರಕ್ತಕೇಂದ್ರಗಳು, ಲಯನ್ಸ್, ಭಾರತೀಯ ರೆಡ್ ಕ್ರಾಸ್ ಸೊಸೈಟಿ ,ರೋಟರಿ ಕ್ಲಬ್, ಕಾಲೇಜು, ವಿದ್ಯಾ ಸಂಸ್ಥೆ ,ರೆಡ್ ರಿಬ್ಬನ್ ಕ್ಲಬ್, ಸಾಮಾಜಿಕ ಸಂಘಸಂಸ್ಥೆ ಜನಪ್ರತಿನಿಧಿಗಳು ಸಂಬಂಧಿಸಿದ ಎಲ್ಲರ ಸಹಕಾರದೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಆಯೋಜಿಸಲು ಸೂಚಿಸಲಾಗಿತ್ತು ಮುಂದುವರಿದು ಸದರಿ ರಕ್ತದಾನ ಶಿಬಿರವನ್ನು ದಿನಾಂಕ17-09-2021ನಿಂದ ಒಂದು ವಾರದವರೆಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಪಾಲಿಸುತ್ತಾ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ರಕ್ತದಾನ ಶಿಬಿರಗಳನ್ನು ಹಮ್ಮಿ ಕೊಳ್ಳಲು ಈ ಮೂಲಕ ಸೂಚಿಸಿದೆ ಸದರಿ ದಿನದ ಅಂತ್ಯಕ್ಕೆ ಸಂಗ್ರಹಿಸಿದ ರಕ್ತ ಮತ್ತು ಜಿಲ್ಲೆಯ ಒಟ್ಟು ಶಿಬಿರಗಳ ವರದಿಯಲ್ಲಿ ಸರ್ಕಾರಕ್ಕೆ ನೀಡಬೇಕು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153