ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಣಿ ಆರಾಧನೆ ಮಹತ್ವ
ನವರಾತ್ರಿಯ ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಬ್ರಹ್ಮಚಾರಣಿ ಎಂದರೆ ಇನ್ನು ಮದುವೆಯಾಗದಿರುವ ಯುವತಿ ಎಂದರ್ಥ ಸೌಮ್ಯ ಶಾಂತ ಸ್ವಭಾವವನ್ನು ಧರಿಸಿರುವ ಬ್ರಹ್ಮಚಾರಿಯು ಮನಸ್ಸನ್ನು ಶಾಂತಗೊಳಿಸಿ ಆತ್ಮವಿಶ್ವಾಸವನ್ನು ಹೆಚ್ಛಿಸುತ್ತಾಳೆ. ಕೈಯಲ್ಲಿ ಗುಲಾಬಿ ಧರಿಸಿರುವ ಈಕೆಯು ಒಂದು ಕೈಯಲ್ಲಿ ಜಪಮಾಲೆ ಹಾಗೂ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಲೆ. ಶ್ವೇತವಸ್ತ್ರ ದಾರಣೆ ಯಾಗಿರುವ ಬ್ರಹ್ಮಚಾರಣಿ ಯು ತನ್ನ ಭಕ್ತರಿಗೆ ಸಂತೋಷ ಹಾಗೂ ಜ್ಞಾನವನ್ನು ನೀಡುವವಳು ಆಗಿದ್ದಾಳೆ.
ಪಾರ್ವತಿಯಾಗಿ ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಅತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದ ದೇವಿಗೆ ತಪಸ್ ವರ್ಣಿ ಅರ್ಥಾತ್ ಬ್ರಹ್ಮಚಾರಣಿ ಎನ್ನುವ ಹೆಸರು ಬಂತು. ತಪಸ್ಸು ಮಾಡುತ್ತಿರುವ ಕಾಲದಲ್ಲಿ ಬರೀ ಹೂವು ಹಣ್ಣುಗಳನ್ನು ಹಾಗೂ ಎಲೆಗಳನ್ನು ಮಾತ್ರ ಒಂದು ಕಾಲದವರೆಗೆ ಸೇವಿಸುತ್ತಿದ್ದಳು ನಂತರದಲ್ಲಿ ಯ ಸೇವೆಯನ್ನು ನಿಲ್ಲಿಸಿದಳು ವರ್ಣ ವೆಂದರೆ ಎಲೆ. ಹಾಗಾಗಿ ಈಕೆಯನ್ನು ಅಪರ್ಣ ಎಂದು ಕರೆಯುತ್ತಾರೆ.
ನಂತರ ಶಿವನೇ ಒಬ್ಬ ಸನ್ಯಾಸಿಯು ರೂಪವನ್ನು ತಾಳಿ ಬಂದು ಶಿವನಲ್ಲಿ ಈಕೆಗೆ ಇರುವ ನಿಷ್ಠೆಯನ್ನು ಪರೀಕ್ಷಿಸಿದನು. ಶಿವನು ಬೂದಿ ಬುಡುಕ ಸ್ಮಶಾನವಾಸಿ ಬಡವ ಬಿಕ್ಷುಕ ಅಂತರ್ಥವನ್ನು ಯಾಕೆ ಬಯಸುತ್ತಿದ್ದೆ ಎಂದೆಲ್ಲಾ ಅಪೇಕ್ಷಿಸಿದ. ಆದರೆ ಪಾರ್ವತಿ ಅದಕ್ಕೆಲ್ಲ ಕಿವಿಗೊಡಲಿಲ್ಲ. ಪರ್ವತಿ ಯು ಅಖಂಡ ನಿಷ್ಠೆಗೆ ಮೆಚ್ಚಿದ ಶಿವ ಒಲಿದ.


ಬ್ರಹ್ಮಚಾರಿಣಿ ಎಂದರೆ ಆನಂದ ಮತ್ತು ಶಾಂತ ಶಕ್ತಿಯನ್ನು ಹೊಂದಿರುವ ರೂಪ. ಕಠಿಣತೆಯನ್ನು ಅಭ್ಯಾಸ ಮಾಡುವ ತಾಯಿ. ಮೋಕ್ಷವನ್ನು ಪಡೆಯಲು ಬಯಸಿದರೆ ಅಥವಾ ಕಾರ್ಯಗಳು ವಿಮೋಚನೆಗೆ ಬಯಸಿದರೆ ದೇವಿಯು ಅವತಾರಕ್ಕೆ ಪೂಜೆ ಸಲ್ಲಿಸಿದರೆ ದೇವಿ ಅನುಗ್ರಹ ಮತ್ತು ಸಮೃದ್ಧಿಯನ್ನು ಕೊಡುವಳು. ಹಾಗಾಗಿ ಎರಡನೇ ದಿನ ಧರಿಸಬೇಕಾದ ಬಣ್ಣ ಎಂದರೆ ಶುದ್ಧತೆಯ ಸಂಕೇತವಾದ ಬಿಳಿ ಬಣ್ಣ.

ಬ್ರಹ್ಮಚಾರಣಿಯ ಮಹತ್ವ…

ಬ್ರಹ್ಮಚಾರಿಯು ಮಂಗಳ ಗ್ರಹದ ಅಧಿಪತಿ. ತನ್ನ ಭಕ್ತರಿಗೆ ಅದೃಷ್ಟವನ್ನು ನೀಡುವವಳು ಹಾಗೂ ಮಾನಸಿಕ ಕಷ್ಟವನ್ನು ಪರಿಹರಿಸಿ ನೆಮ್ಮದಿಯನ್ನು ದಯಪಾಲಿಸುವವಳು ಬ್ರಹ್ಮಚಾರಣಿ. ಜನ್ಮ ಕುಂಡಲಿಯಲ್ಲಿ ಮಂಗಳ ಗ್ರಹವು ಕೆಟ್ಟ ಸ್ಥಾನದಲ್ಲಿದ್ದರೆ ಹಾಗೂ ಮಂಗಳ ದೋಷವಿದ್ದರೆ ಬ್ರಹ್ಮಚಾರಣಿ ಯನ್ನು ಪೂಜಿಸುವುದು ಒಳ್ಳೆಯದು.

ನವರಾತ್ರಿ ಯಾರು ಉಪಾಸನೆ ಮತ್ತು ಯಾಕಾಗಿ ?

ಬ್ರಹ್ಮ ಚರಣೆಗೆ ಬಹಳ ಇಷ್ಟವಾದ ಹೂವು ಮಲ್ಲಿಗೆ. ಹಾಗಾಗಿ ನವರಾತ್ರಿಯ ಎರಡನೇ ದಿನ ಮಲ್ಲಿಗೆಯಿಂದ ಆಕೆಯನ್ನು ಅಲಂಕರಿಸಿ ಪೂಜಿಸಿ ಮಾತೆಯ ಆಶೀರ್ವಾದವನ್ನು ಪಡೆದುಕೊಳ್ಳಿ. ಬ್ರಹ್ಮಚಾರಿಯ ಪೂಜೆಯನ್ನು ಮಾಡುವಾಗ 16 ಅರ್ಪಣೆಗಳನ್ನು ಮಾಡಿ ಆರತಿಯೊಂದಿಗೆ ಪೂಜೆಯನ್ನು ಅಂತ್ಯಗೊಳಿಸಿ.
ಮನಸ್ಸನ್ನು ತಿಳಿಯಾಗಿಸುವ ಶೈಲಪುತ್ರಿ: ನವರಾತ್ರಿಯ ಮೊದಲ ದಿನದ ದೇವಿ ಆರಾಧನೆ
ಬ್ರಹ್ಮಚಾರಣಿಯ ಆರಾಧನೆಯು ಸಮವಾಗಿರುತ್ತದೆ. ಭಕ್ತರಲ್ಲಿ ದುರ್ಗುಣಗಳ ಕಳೆದು ಸದ್ಗುಣಗಳು ಬೆಳೆಯುತ್ತದೆ. ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳು ಸರಿದು ಮನಸ್ಸಿಗೆ ಶಾಂತಿ ಹಾಗೂ ಮಾಡುವ ಎಲ್ಲಾ ಕೆಲಸದಲ್ಲೂ ನೆಮ್ಮದಿ ದೊರೆಯುವುದು.

ಬ್ರಹ್ಮಚಾರಣಿಯ ಅರ್ಚನೆಯ ಮಂತ್ರ…
ಓಂ ದೇವಿ ಬ್ರಹ್ಮಚಾರಣಿ ನಮ
ಓಂ ಆದಿಶಕ್ತಿಯೇ ನಮ
ಓಂ ಶ್ರೀ ಬ್ರಹ್ಮಚಾರಣಿ ದೇವಿ ನಮ
ಓಂ ನಮಃ ಶಿವಾಯ
ಶಂಭೋ ಶಂಕರ ಹರ ಹರ ಮಹಾದೇವ 🙏🙏🙏

ಎಂ ಎ ಸುಗಂಧಿ
ಪ್ರಜಾ ಶ್ರೀ ಪತ್ರಿಕೆ ಸಂಪಾದಕರು
ಹೈಕೋರ್ಟ್ ವಕೀಲರು ಬೆಂಗಳೂರು…