ಇನ್ಸ್ ಪೆಕ್ಟರ್ ಹನುಮಂತಪ್ಪ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಜಾನ್ ಹಾಗೂ ಚಂದ್ರ ಅವರ ನೇತೃತ್ವದಲ್ಲಿ ಎಕ್ಸೈಸ್ ಹೆಡ್ ಕಾನ್ ಸ್ಟೆಬಲ್ ರಾಜಮ್ಮ ಹಾಗೂ ಡ್ರೈವರ್ ಅರ್ಜುನ, ಮೇ 30 ರಂದು ಕಾರ್ಯಾಚರಣೆ ನಡೆಸಿ 3ಪ್ರಕರಣಗಳನ್ನು ದಾಖಲಿಸಿದೆ . ಸೊರಬದ ಹಂಚಿ ತಾಂಡದ ಮೇಲೆ ನಡೆದ ದಾಳಿಯಲ್ಲಿ ಕುಮಾರ ನಾಯ್ಕ ಎಂಬಾತನ ಮೇಲೆ ಪ್ರಕರಣ ದಾಖಲಿಸಿ 1ಡ್ರೀಮ್ ಯುಗ ಬೈಕ್ ಹಾಗೂ 5ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಎರಡನೇ ಪ್ರಕರಣದಲ್ಲಿ ರಾಮ ನಾಯ್ಕ್ ಅವರ ಮನೆಯಿಂದ ಎಂಬತ್ತು ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ .
ಮತ್ತೊಂದು ಪ್ರಕರಣದಲ್ಲಿ ಕುಂಬ್ಯ ನಾಯ್ಕ್ ಬಂಧಿಸಿ 2 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ

ವರದಿ : ಮಂಜುನಾಥ್ ಶೆಟ್ಟಿ ಶಿವಮೊಗ್ಗ