ಧಾರವಾಡ ನ್ಯೂಸ್…

25/10/21 ಧಾರವಾಡ ಜಿಲ್ಲೆಗೆ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಚನ್ನವೀರಪ್ಪ ಗಾಮನಗಟ್ಟಿ ರವರು ಬಂದ ವಿಷಯ ತಿಳಿದ, ಧಾರವಾಡ ಜಿಲ್ಲೆಯ ನಾರಾಯಣಪುರ ಜರ್ಮನ್ ಆಸ್ಪತ್ರೆವೃತ್ತದ ಬೀದಿ ಬದಿ ವ್ಯಾಪಾರಸ್ಥರು, ನಮಗೆ ಸರ್ಕಾರದ ಸೌಲಭ್ಯಗಳ ಹಾಗೂ ಇತರೆ ಮಾಹಿತಿಗಳ ಬಗ್ಗೆ ತಿಳಿಯದು ನಾವುಗಳು ಶಿವಮೊಗ್ಗ ಜಿಲ್ಲೆಯಂತೆ ಬೂತ್ ಮಟ್ಟದ ಅಧ್ಯಕ್ಷರ ನೇಮಕ ಮಾಡುತ್ತೇವೆ, ನಮಗೆ ಸರ್ಕಾರದ ಸೌಲಭ್ಯಗಳ ಮಾಹಿತಿಗಳು ಸಂಘ ರಚನೆಯ ಮಾರ್ಗದರ್ಶನ ನೀಡಿ ಎಂದರು.

ಅದಕ್ಕೆ ರಾಜ್ಯದ ರಾಜ್ಯಾಧ್ಯಕ್ಷರಾದ ಸಿಈ ರಂಗಸ್ವಾಮಿ, ಕಾರ್ಯದರ್ಶಿಗಳಾದ ಅನ್ವರ್ ಶಿರಹಟ್ಟಿ ರವರು ಹಾಗೆ ಧಾರವಾಡ ಜಿಲ್ಲೆಯ ಅಧ್ಯಕ್ಷರು ಇರುವರು ನಿಮ್ಮ ಬಗ್ಗೆ ತಿಳಿಸಲಾಗುವುದು, ಸರ್ಕಾರದ 2014ರ ಬೀದಿ ಬದಿ ಜೀವನೋಪಾಯ ವ್ಯಾಪಾರಿಗಳ ಕಾಯ್ದೆಗಳ ಬಗ್ಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಸ್ವಸಹಾಯ ಸಂಘಗಳ ರಚನೆ ಬಗ್ಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾಗಿ ಶ್ರೀ ಯಲ್ಲಪ್ಪ ರಾಯಬಾಗ ರವರನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಸಭೀರ್ ಬಟನ್ ವಾಲೆ, ಮಹಮ್ಮದ್ ಅಲಿ ಶೈಕ್, ಇಬ್ರಾಹಿಂ ಬಟನ್ ವಾಲೆ, ಮುಕ್ತಾರ್ ಶೇಕ್, ಶ್ರೀ ನಿವಾಸ ದಾವೂದ್ ಕಿತ್ತೂರು, ಆರ್ಡಿನ್, ವಿಶ್ವನಾಥ್, ಮೆಹಬೂಬ್ ಶೇಕ್, ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…