ಈ ದಿನ ದಿನಾಂಕ 2.6.2021 ರ ಮಧ್ಯರಾತ್ರಿ 00.15am ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಶಿಕಾರಿಪುರ ತಾಲೂಕಿನ ಮಳವಳ್ಳಿ ತಾಂಡದ ಮಲ್ಲಪ್ಪನ ಕಟ್ಟೆ ಕೆರೆಯ ದಡದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಕ ಮಾಡುತ್ತಿರುವುದನ್ನು ಪತ್ತೆಹಚ್ಚಿ 135 ltr ಬೆಲ್ಲದ ಕೊಳೆ ಹಾಗೂ 09 ltr ಕಳ್ಳಭಟ್ಟಿ ಸಾರಾಯಿ ಹಾಗೂ ಕಳ್ಳಬಟ್ಟಿ ಸರಾಯಿ ತಯಾರಿಸಲು ಬೇಕಾದ ಪರಿಕರಗಳನ್ನು ವಶಪಡಿಸಿಕೊಂಡಿದ್ದು ದಾಳಿಯ ವೇಳೆ ಆರೋಪಿಗಳಾದ ಬೀರಾ ನಾಯಕ್ ಬಿನ್ ಶೇಖರ್ ನಾಯಕ್ 23, ಮಳವಳ್ಳಿ ತಾಂಡಾ ಹಾಗೂ ಆತನ ತಾಯಿ ಲೋಕಿ ಬಾಯಿ ಕೊಮ್ ಶೇಖರ ನಾಯಕ 44 ಕತ್ತಲೆಯಲ್ಲಿ ಓಡಿ ತಲೆಮರೆಸಿಕೊಂಡಿರುತ್ತಾರೆ ಸದರಿ ಕಾರ್ಯಾಚರಣೆಯನ್ನು ಹನುಮಂತಪ್ಪ ಡಿ ಎನ್ ಅಬಕಾರಿ ನಿರೀಕ್ಷಕರ ನೇತೃತ್ವದಲ್ಲಿ ಜಾನ್ ಪಿಜೆ ಅಬಕಾರಿ ಉಪ ನಿರೀಕ್ಷಕರು ಹಾಗೂ ಅಬಕಾರಿ ಹಿರಿಯ ಪೇದೆ ಚಂದ್ರಪ್ಪ ವಾಹನ ಚಾಲಕರಾದ ಅರ್ಜುನ ಮತ್ತು ದಾಳಿ ಸಹಾಯಕ ಓಂಕಾರ ನಾಯಕ ಭಾಗವಹಿಸಿರುತ್ತಾರೆ ಸದರಿ ಪ್ರಕರಣವನ್ನು ಹನುಮಂತಪ್ಪ ಡಿ ಎನ್ ರವರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ