ಶಿವಮೊಗ್ಗ ನ್ಯೂಸ್…

ಸಿರಿಕನ್ನಡ ವಾಹಿನಿ ವತಿಯಿಂದ ಶಿವಮೊಗ್ಗದಲ್ಲಿ ನವೆಂಬರ್ ೨೦ ಮತ್ತು ೨೧ರಂದು ಹಾಸ್ಯ ದರ್ಬಾರ್ ಕಾರ್ಯಕ್ರಮವನ್ನು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಎರಡು ದಿನ ಬೆಳಿಗ್ಗೆ ೧೧ಕ್ಕೆ ಮತ್ತು ಸಂಜೆ ೪ಕ್ಕೆ ಒಟ್ಟು ನಾಲ್ಕು ಬಾರಿ ನಡೆಯುವ ಈ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಾದ ಪ್ರಾಣೇಶ್, ಮುಖ್ಯಮಂತ್ರಿ ಚಂದ್ರು, ಪ್ರೊ. ಕೃಷ್ಣೇಗೌಡ್ರು, ಎಂ.ಎಸ್. ನರಸಿಂಹಮೂರ್ತಿ, ಗುಂಡೂರಾವ್, ಸುಧಾಬರಗೂರು, ಸಿಹಿಕಹಿ ಚಂದ್ರು, ಮಿಮಿಕ್ರಿ ದಯಾನಂದ್, ಶಿವಮೊಗ್ಗದ ಉಮೇಶ್‌ಗೌಡ ಮುಂತಾದವರು ಭಾಗವಹಿಸಲಿದ್ದಾರೆ.ಸಿರಿಕನ್ನಡ ಆಲ್ ಟೈಮ್ ವಾಹಿನಿಯು ಈಗಾಗಲೇ ನಾಡಿನಲ್ಲಿ ಮನೋರಂಜನಾ ಕಾರ್ಯಕ್ರಮಗಳನ್ನು ನೀಡುತ್ತಾ ಜನಮೆಚ್ಚುಗೆ ಪಡೆಯುತ್ತಿದೆ.

ಧಾರಾವಾಹಿಗಳಾದ ಧ್ರುವ ನಕ್ಷತ್ರ, ಪ್ರೇಮ್ ಜೊತೆ ಅಂಜಲಿ ಮುಂತಾದವುಗಳು ಪ್ರಸಾರವಾಗುತ್ತಿವೆ. ಶೀಘ್ರದಲ್ಲಿಯೇ ಸರ್ಕಾರಿ ನ್ಯಾಯಬೆಲೆ ಅಂಗಡಿ, ಪಾಂಡವಪುರ, ಅಮರ ಮಧುರ ಪ್ರೇಮ ಧಾರಾವಾಹಿಗಳು ಆರಂಭವಾಗಲಿದ್ದು, ಈ ಧಾರಾವಾಹಿಗಳ ಕಲಾವಿದರು ಸಹ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಕನ್ನಡಿಗ ಮತ್ತು ಶ್ರೇಷ್ಠ ಕನ್ನಡತಿ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಶಿವಮೊಗ್ಗದ ಕಲಾಸಕ್ತರು, ಹಾಸ್ಯಪ್ರೇಮಿಗಳು ಕಾರ್ಯಕ್ರಮಕ್ಕೆ ಆಗಮಿಸುವಂತೆ ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ ಮತ್ತು ಸಿರಿಗನ್ನಡ ವಾಹಿನಿಯ ಸಂಸ್ಥಾಪಕ ನಿರ್ದೇಶಕರ ಸಂಜಯ್ ಸಿಂಧೆ ಕೋರಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…