ಸಾಗರ ನ್ಯೂಸ್…

ಸಾಗರ ತಾಲೂಕು ಅನಂದಪುರದ ಯಡೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೊರಾರ್ಜಿ ಶಾಲೆಯ ಮಕ್ಕಳು ಇಂದು ಬೆಳಿಗ್ಗೆ ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ ನಿರತರಾಗಿದ್ದರು.

ಶಾಲೆಯ ಪ್ರಾಂಶುಪಾಲ, ಆರೋಗ್ಯ ಸಿಬ್ಬಂದಿಯ ಗಂಡ , ಶಾಲೆಯ ಮಕ್ಕಳೊಂದಿಗೆ ಅಸಭ್ಯ ವರ್ತನೆ, ಕಿರಿಕುಳ ನೀಡುತ್ತಿದ್ದರು. ಈ ವಿಚಾರವಾಗಿ ಹಠಾತ್ತನೆ ಪ್ರತಿಭಟನೆಗೆ ನಿರತರಾದ ವಿಧ್ಯಾರ್ಥಿಗಳು ಮತ್ತು ಪೋಷಕರು ಭಾಗಿಯಾಗಿದ್ದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ‌ಮಕ್ಕಳು, ಪೋಷಕರು ಹಾಗೂ ಸ್ಥಳಿಯರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿ
ಯಡೆಹಳ್ಳಿ ಸರ್ಕಲ್‌ನಲ್ಲಿ ರಸ್ತೆ ತಡೆ ಮಾಡಿದರು.

ಆಗ ಸ್ಥಳಕ್ಕೆ ಆಗಮಿಸಿದ ಸಾಗರದ ಎಸಿ ಯವರು, ಸಮಾಜ ಕಲ್ಯಾಣಾಧಿಕಾರಿಗಳು ತಕ್ಷಣ ಪ್ರಾಂಶುಪಾಲರನ್ನು ಅಮಾನತ್ತುಗೊಳಸಿದರು.

ಗೋಪಾಲಕೃಷ್ಣ ಬೇಳೂರು ಅವರು ಮಕ್ಕಳು ಹಾಗೂ ಪೋಷಕರ ಮನವೊಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…