ದಾವಣಗೆರೆ ನ್ಯೂಸ್…

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಹೊನ್ನಾಳಿ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯ ಅವ್ಯವಸ್ಥೆಯ ಗೂಡಾಗಿದ್ದು ಈ ಅವ್ಯವಸ್ಥೆ ವಿರುದ್ಧ ಕೆಲವು ತಿಂಗಳ ಹಿಂದಿನಿಂದಲೂ ಅನೇಕ ಮನವಿ ಕೊಟ್ಟರೂ ಬಗೆಹರಿಸದ ಶಾಖೆಯ ಅಧಿಕಾರಿಗಳು ಮತ್ತು ಮೇಲಾಧಿಕಾರಿಗಳು ವಿರುದ್ಧ ಇಂದು ಹೊನ್ನಾಳಿ ತಾಲ್ಲೂಕಿನ ಭ್ರಷ್ಟಾಚಾರ ವಿರೋಧಿ ವೇದಿಕೆ.ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ) ಬಳಗ .ಕರ್ನಾಟಕ ರಾಷ್ಟ್ರ ಸಮಿತಿ.ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ತಾಲ್ಲೂಕು ಘಟಕ. ಹೊನ್ನಾಳಿ ತಾಲ್ಲೂಕು ಎನ್ ಎಸ್ ಯುಐ ವಿವಿಧ ಸಂಘಟನೆಗಳ ಜತೆಗೂಡಿ ಕೆನರಾ ಬ್ಯಾಂಕಿನಲ್ಲಿ ಗ್ರಾಹಕರಿಗೆ ಆಗುತ್ತಿರುವ ತೊಂದರೆಗಳನು ಸರಿಪಡಿಸಿ ತೃಪ್ತಿಕರ ಮತ್ತು ಗುಣಮಟ್ಟದ ಸೇವೆಯನ್ನು ಒದಗಿಸಬೇಕು ಎಂದು ಆಗ್ರಹಿಸಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಭ್ರಷ್ಟಾಚಾರ ವಿರೋಧಿ ವೇದಿಕೆಯ ರಾಜ್ಯಾಧ್ಯಕ್ಷ ಗುರುಪಾದಯ್ಯ ಮಠದ್.ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ವಿನಯ್ ಎಂ ವಗರ್.ಕರ್ನಾಟಕ ರಾಷ್ಟ್ರಸಮಿತಿ ದಾವಣಗೆರೆ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಹಳ್ಳಿಕೆರೆ.ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ತಾಲ್ಲೂಕು ಅಧ್ಯಕ್ಷ ಬಸವರಾಜ್.ಎನ್ ಎಸ್ ಯು.ಐ ಅಧ್ಯಕ್ಷ ಮನೋಜ್ ವಾಲಿ.ಭ್ರಷ್ಟಾಚಾರ ವಿರೋಧಿ ವೇದಿಕೆಯ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಸೊರಟೂರ ಭಾಗವಹಿಸಿದ್ದರು ಇನ್ನೂ ಅನೇಕ ಜನ ಸಾರ್ವಜನಿಕರು ಮತ್ತು ಬ್ಯಾಂಕಿನ ಗ್ರಾಹಕರು ಈ ಹೋರಾಟಕ್ಕೆ ಸಹಿ ಮಾಡುವುದರ ಮೂಲಕ ಬೆಂಬಲವನ್ನು ಸೂಚಿಸಿದ್ದರು ಸಾರ್ವಜನಿಕರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…