ದಿನಾಂಕ 05:12:2021 ರಂದು ಶಿವಮೊಗ್ಗ ನಗರದ ಎಪಿಎಂಸಿ ಮಾರ್ಕೆಟ್ ಹತ್ತಿರ ಭಾರ್ಗವಿ ಪೆಟ್ರೋಲ್ ಬಂಕ್ ನ ಮುಂಭಾಗದಲ್ಲಿ ಇರುವಂತಹ ಅತಿ ಪುರಾತನ ಆಂಜನೇಯ ಸ್ವಾಮಿಯ ದೇವಸ್ಥಾನವನ್ನು ಈ ದಿನ ಶಿವಮೊಗ್ಗದ ಸ್ಮಾರ್ಟ್ ಸಿಟಿ ಕಾಮಗಾರಿಯ ಹೆಸರಿನಲ್ಲಿ ದೇವಸ್ಥಾನವನ್ನು ನೆಲಸಮ ಮಾಡಿರುತ್ತಾರೆ.

ದೇವಸ್ಥಾನದ ತೆರವು ಕಾರ್ಯ ನಡೆಯುತ್ತಿರುವಾಗ ನಾಗರ ಹಾವೊಂದು ಪ್ರತ್ಯಕ್ಷವಾದರು ಸಹ ಅದನ್ನು ಕಡೆಗಣಿಸಿ ಹಾವನ್ನು ಕೊಂದು ಕಾಮಗಾರಿ ಮಾಡಲು ಮುಂದಾಗಿರುತ್ತಾರೆ. ಇದರ ವಿಷಯವಾಗಿ ಸ್ಥಳೀಯರ ನೇತೃತ್ವದಲ್ಲಿ ಹೋರಾಟ ನಡೆಸಲಾಯಿತು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…