ಕ್ರೈಂ ನ್ಯೂಸ್…

ದಿನಾಂಕಃ-29-12-2021 ರಂದು ಭದ್ರಾವತಿ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರೆಬಿಳಚಿ ಕ್ಯಾಂಪ್ ನ ವಾಸಿಯೊಬ್ಬರು ತನ್ನ ಹೆಂಡತಿಯ ಹೆರಿಗಾಗಿ ಭದ್ರಾವತಿಯ ನಿರ್ಮಲಾ ಆಸ್ಪತ್ರೆಗೆ ಹೋಗಿದ್ದು ನಂತರ ದಿನಾಂಕಃ-04-01-2022 ರಂದು ಪುನಾಃ ಮನೆಗೆ ವಾಪಾಸ್ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಬೀಗವನ್ನು ಒಡೆದು ಮನೆಯ ಒಳಗಿದ್ದ ಟಿ.ವಿ ಹಾಗೂ ರೂ 50,000/- ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0001/2022 ಕಲಂ 454, 457 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ.

ಪಿಐ, ಪಿಎಸ್ಐ ಹೊಳೆಹೊನ್ನೂರು ಠಾಣೆ ಹಾಗೂ ಸಿಬ್ಬಂದಿಗಳ ತಂಡವು ಸದರಿ ಪ್ರಕರಣದ ತನಿಖೆ ಕೈಗೊಂಡು ಪ್ರಕರಣದ ಆರೋಪಿಗಳಾದ 1)ಸುರೇಶ @ ಕರಡಿ, 24 ವರ್ಷ, ಹಾಯ್ ಹೊಳೆ ಗ್ರಾಮ ಶೀವಮೊಗ್ಗ, 2)ಪ್ರವೀಣ, 22 ವರ್ಷ, ಮಿಳ್ಳಘಟ್ಟ ಶಿವಮೊಗ್ಗ ಟೌನ್ 3)ಅಭಿಶೇಕ್, 22 ವರ್ಷ, ಮಿಳ್ಳಘಟ್ಟ ಶಿವಮೊಗ್ಗ ಟೌನ್ ಮತ್ತು 4)ಶಿವಕುಮಾರ್, 23 ವರ್ಷ, ಗಾಜನೂರು ಶಿವಮೊಗ್ಗ ರವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಹೊಳೆಹೊನ್ನೂರು ಠಾಣೆಯ-1, ತುಂಗಾನಗರ ಠಾಣೆಯ-2 ಮತ್ತು ತೀರ್ಥಹಳ್ಳಿ ಠಾಣೆಯ 1 ಪ್ರಕರಣ ಸೇರಿ 04 ಸುಲಿಗೆ ಪ್ರಕರಣಗಳು ಮತ್ತು

ಹೊಳೆಹೊನ್ನೂರು ಹಾಗೂ ಮಾಳೂರು ಪೊಲೀಸ್ ಠಾಣೆಯ 02 ಮನೆಗಳ್ಳತನ ಪ್ರಕರಣಗಳು ಮತ್ತು ಹೊಳೆಹೊನ್ನೂರು ಠಾಣೆಯ-4, ತುಂಗಾನಗರ ಠಾಣೆಯ -1, ಶಿಕಾರಿಪುರ ಟೌನ್ ಠಾಣೆಯ-1, ಶಿವಮೊಗ್ಗ ಗ್ರಾಮಾಂತರ ಠಾಣೆಯ-1 ಮತ್ತು ರಿಪ್ಪನ್ ಪೇಟೆ ಠಾಣೆಯ 1 ಪ್ರಕರಣ ಸೇರಿ 08 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು 14 ಪ್ರಕರಣಗಳಿಗೆ ಸಂಬಂಧಿಸಿದ 52 ಗ್ರಾಂ 540 ಮಿಲಿ ತೂಕದ ಬಂಗಾರದ ಆಭರಣಗಳು, 08 ದ್ವಿ ಚಕ್ರ ವಾಹನಗಳು ಮತ್ತು 01 ಸೋನಿ ಟಿವಿಯನ್ನು ವಶಪಡಿಸಿಕೊಂಡಿರುತ್ತದೆ.

ವರದಿ ಮಂಜುನಾಥ್ ಶೆಟ್ಟಿ…