ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ 2021-22 ನೇ ಸಾಲಿನ ಲಾಭಾಂಶದ ಹಣವನ್ನು ಚೆಕ್ಕನ್ನು ಎಸ್ ದತ್ತಾತ್ರಿ ಮೂಲಕ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ 2021-22 ನೇ ಸಾಲಿನ ಶೇಕಡಾ 30ರಷ್ಟು ಲಾಭಾಂಶದ ಹಣ 3,62,77,412 ರೂ ಈ ವರ್ಷವೂ ಘೋಷಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾನ್ಯ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶ್ರೀ ಎಂ.ಟಿ.ಬಿ ನಾಗರಾಜ್, KSSIDC ಯ ಅಧ್ಯಕ್ಷರಾದ ಶ್ರೀ ಕಳಕಪ್ಪ ಬಂಡಿ, ವ್ಯವಸ್ಥಾಪಕ ನಿರ್ದೇಶಕರಾದ (MD) ಶ್ರೀಮತಿ ಸಿ. ಸತ್ಯಭಾಮಾ, ಕಂಪನಿ ಸೆಕ್ರೆಟರಿ ದೀರೆನ್, ನಿರ್ದೇಶಕರುಗಳಾದ ಎಸ್.ಸಿ ಪಾಟೀಲ್, ಕೆ. ನಾರಾಯಣ ಪ್ರಸನ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…