ಸಂವಿಧಾನ ಜಾರಿಗೆ ಬಂದ ದಿನವಾದ ಜನವರಿ 26ರಂದು (ಗಣರಾಜ್ಯೋತ್ಸವ) ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದರೆ ಮಾತ್ರ ಧ್ವಜಾರೋಹಣ ಮಾಡಲು ಬರುವುದಾಗಿ ಹೇಳಿ ತಮ್ಮ ಪ್ರಭಾವವನ್ನು ಬಳಸಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಾಯ೯ಕ್ರಮದ ಮುಖ್ಯ ಸ್ಥಳದಿಂದ ತೆಗೆಸಿ ಅಪಮಾನ ಮಾಡಿದ ರಾಯಚೂರು ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಸಿ. ಬಿ. ಆರ್. ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿ ವಕೀಲರ ವೇದಿಕೆಯ ವತಿಯಿಂದ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾನೂನು ವಿಧ್ಯಾರ್ಥಿಗಳಾದ ಸುರೇಶ್ ಬಾಬು. ರಾಕೇಶ್.ಟಿ.ಕೆ. ನಿರಂಜನ್ ಮೂತಿ೯.ಆರ್.ಕೆ. ಗಜೇಂದ್ರ. ಆನಂದ್.ವೀರೇಂದ್ರ.ಆದಶ್೯.ಇತರರು ಪಾಲ್ಗೊಂಡಿದ್ದರು.

ವರದಿ ಮಂಜುನಾಥ್ ಶೆಟ್ಟಿ…