ಇಂದು ಶಿವಮೊಗ್ಗ ಜೆಸಿಐ ಶರಾವತಿ ಘಟಕದಿಂದ , ಆಯನೂರು ರಸ್ತೆಯ ಮುದ್ದಿನಕೊಪ್ಪ ಟ್ರೀಪಾರ್ಕ್ ನಲ್ಲಿ APP ಬಡ್ಜೆಟ್ ಮತ್ತು GB ಸಭೆ ಯನ್ನು ನೆಡೆಸಲಾಯಿತು.

ಸಭೆಯಲ್ಲಿ ಜೆಸಿ ಶಿವಮೊಗ್ಗ ಶರಾವತಿ ಘಟಕದಿಂದ 2021ರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮಕಗಳ ಯಶಸ್ವಿಗೆ ಕಾರಣರಾದ ಜೆಸಿ ಸದಸ್ಯರು ಹಾಗೂ ಪದಾಧಿಕಾರಿಗಳಿಗೆ ಜೆಸಿ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು. 2022ರ ವರ್ಷದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಕಾಲೇಜು ದತ್ತು ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು, ಶ್ರೀಸಾಮಾನ್ಯರ ನಡಿಗೆ ನಾಯಕತ್ವದ ಕಡೆಗೆ ಎಂಬ ಈ ವರ್ಷದ ವಿಭಿನ್ನ ಕಾರ್ಯಕ್ರಮದ ಬಗ್ಗೆ ಜೆಸಿ ಗಾರಾ ಶ್ರೀನಿವಾಸ್ ಅವರು ಮಾತನಾಡಿದರು.
ಘಟಕದ ಅಧ್ಯಕ್ಷರಾದ ಜೆಸಿ ಸೌಮ್ಯ ಅರಳಪ್ಪ ಮತ್ತು ಜೆಸಿ ಭಾರತಿ ರಾಮಕೃಷ್ಣ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಸ್ವೀಕರಿಸಲು ಸಹಕರಿಸಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ರಾದ ಜೆಸಿ ಸೌಮ್ಯ ಅರಳಪ್ಪನವರು, ಕಾರ್ಯದರ್ಶಿ ಜೆಸಿ ಮಮತಾ ಶಿವಣ್ಣ, ವಿಷೇಶ ಆಹ್ವಾನಿತರದ ಜೆಸಿ ಹಾಗೂ ಸಾಮಾಜಿಕ ದನಿ ಶ್ರೀಕಾಂತರವರು, ಜೆಸಿ ಭಾರತಿ ರಾಮಕ್ರಷ್ಣ, ಜೆಸಿ ಜ್ಯೋತಿ ಅರಳಪ್ಪನವರು, ಜೆಸಿ ಗಾ ರಾ ಶ್ರೀನಿವಾಸ್, ಜೆಸಿ ಮೋಹನ್ ಕಲ್ಪತರು, ಜೆಸಿ ಕವಿತಾ ಸಾಗರ್, ಜೆಸಿ ಸ್ವಪ್ನ ಸಂತೋಷ್ , ಜೆಸಿ ಶೋಭಾಸತೀಶ್, ಜೆಸಿ ಚಿರಂಜೀವಿ ಬಾಬು, ಜೆಸಿ ಚಂದ್ರಹಾಸ್ ರಾಯ್ಕರ್, ಜೆಸಿ ಪರಮೇಶ್ವರ್, ಜೆಸಿ ನವೀನ್ ತಲಾರಿ, ಜೆಸಿ ಸಿಗ್ಬತ್ ಉಲ್ಲಾ, ಜೆಸಿ ಅನಿಲ್ ವರ್ಣೇಕರ್ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಎಲ್ಲಾ ಜೆಸಿ ಸದಸ್ಯರೂ ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…