ಧಾರವಾಡ ನ್ಯೂಸ್…

ಕುಂದಗೋಳ: ಮನುಷ್ಯರ ಹುಟ್ಟು ಹಬ್ಬವನ್ನೆ ಆಚರಿಸುವುದನ್ನು ನಾವೆಲ್ಲ ಮರೆತಿದ್ದೇವೆ. ವಾಟ್ಸಪ್‌,ಫೆಸಬುಕ್ ಬಂದ ನಂತರ ಸಾಮಾಜಿಕ ಜಾಲತಾಣದಲ್ಲಿ ಹುಟ್ಡು ಹಬ್ಬವನ್ನು ಆಚರಿಸುತ್ತೇವೆ.

ಪ್ರತಿ ವರ್ಷ ತಪ್ಪದೇ ತಮ್ಮ ಮುದ್ದು ಹೋರಿಯ ಬರ್ತಡೆ ಸೆಲೆಬ್ರೇಷನ್ ಮಾಡಲಾಗುತ್ತಿದೆ. ಹೌದು.ಇಂದಿನ ದಿನಮಾನಗಳಲ್ಲಿ ಪ್ರಾಣಿಗಳ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಇತರರಿಗೂ ಮಾದರಿಯಾಗಿದೆ ಅಲ್ಲಾಪೂರದ ಹಣಮಂತಪ್ಪ ಅವರ ಮನೆತನ.

ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ಹನುಮಂತಪ್ಪ ದೊಡ್ಡದ ಮನೆಯಲ್ಲಿ ಜನಿಸಿದ ಹೋರಿ ಎರಡು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು‌. ಹೋರಿಗೆ ಶಾಲು ಹೊದಿಸಿ ಆರುತಿ ಎತ್ತಿ ಕೇಕೆ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು‌.

ಈ ಸಂದರ್ಭದಲ್ಲಿ ಮನೆಯವರು ಸ್ನೇಹಿತರು ಓಣಿಯ ಗೆಳೆಯರ ಬಳಗ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…