ನಿನ್ನೆ ನಗರದ ಶ್ರೀ ರಾಮ ನಗರದಲ್ಲಿರುವ ಶ್ರೀ ರಾಮ ಸಭಾ ಭವನದಲ್ಲಿ, ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಮಹಿಳೆಯರಿಗೆ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ಆಯರ್ವೇದದಿಂದ ಚಿಕಿತ್ಸೆಯಿಂದ ಉತ್ತಮ ಆರೋಗ್ಯ ಹೊಂದುವ ಬಗ್ಗೆ , ಸ್ತ್ರೀ ಶಕ್ತಿ ಮಹಿಳಾ ಸಂಘದ ಮಹಿಳೆಯರಿಗೆ ಡಾ।। ಪ್ರಕೃತಿ ಅವರಿಂದ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ವೈದ್ಯರಾದ ಪ್ರಕೃತಿಯವರು ಮಹಿಳೆಯರಿಗೆ ಹಲವು ಕಾಯಿಲೆಗಳ ಬಗ್ಗೆ, ಕಾಯಿಲೆಯನ್ನು ಮುನ್ನೆಚ್ಚರಿಕೆಯಿಂದ ತಡೆಯುವ ಬಗ್ಗೆ, ಸಾಮಾನ್ಯ ಹಾಗೂ ಮಹಿಳೆಯರಿಗೆ ಗುಪ್ತ ಕಾಯಿಲೆಗಳನ್ನು ಆಯುರ್ವೇದದ ಮೂಲಕ ಬಗೆಹರಿಸಿಕೊಳ್ಳುವ ಬಗ್ಗೆ ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಅಧ್ಯಕ್ಷರಾದ ಸೌಮ್ಯ ಅರಳಪ್ಪ, ಕಾರ್ಯದರ್ಶಿಗಳಾದ ಮಮತಾ ಶಿವಣ್ಣ, ಜೆಸಿ ಅಶ್ವಿನಿ ಆನಂದ್, ಜೆಸಿ ಸ್ವಪ್ನ ಸಂತೋಷ್, ಜೆಸಿ ಯ ಇತರೆ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ ಮಂಜುನಾಥ್ ಶೆಟ್ಟಿ…