ಶಿವಮೊಗ್ಗ: ಹೊಸಮನೆ ಬನಶಂಕರಿ ಬಡಾವಣೆಯ ಶ್ರೀ ದೊಡ್ಡಮ್ಮ ಜಲದುರ್ಗಮ್ಮ ದೇವಾಲಯ ಸಮಿತಿ ಹಾಗೂ ಶ್ರೀ ಯಾಗ ಕ್ಷತ್ರಿಯ ಸಾಧುಶೆಟ್ಟಿ ಸಂಘ ಇವರ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕಾಮಾಕ್ಷಿ ಸಮುದಾಯ ಭವನ ಮತ್ತು ಶ್ರೀ ದೊಡ್ಡಮ್ಮ ಜಲದುರ್ಗಮ್ಮ ದೇವಾಲಯದ ನವೀಕರಣ ಕಾಮಗಾರಿಗೆ ಇಂದು ಸಚಿವ ಕೆ.ಎಸ್. ಈಶ್ವರಪ್ಪ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಸಚಿವ ಈಶ್ವರಪ್ಪ, ಈ ಜನಾಂಗದ ಬಹುದಿನದ ಕನಸು ಇದಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮಾಜ ಇದಾಗಿದೆ. ಕಳೆದ 15 ವರ್ಷಗಳಿಂದ ಈಚೆಗೆ ಸಮಾಜ ಬೆಳೆದಿದೆ. ಮತ್ತು ವಿದ್ಯಾವಂತರಾಗುತ್ತಿದ್ದಾರೆ ಎಂದರು.ಸಮಾಜ ಬಾಂಧವರು, ಭಕ್ತಾದಿಗಳು ಒಟ್ಟಾಗಿ ಸುಸಜ್ಜಿತ ಸಮುದಾಯ ಭವನ, ದೇವಾಲಯ ನವೀಕರಣಕ್ಕೆ ಕೈಹಾಕಿದ್ದಾರೆ. ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದ್ದು, ಇದು ಯಶಸ್ವಿಯಾಗಲಿ. ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಶ್ರೀ ದೊಡ್ಡಮ್ಮ ಜಲದುರ್ಗಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎನ್. ಉಮಾಪತಿ, ಉಪಾಧ್ಯಕ್ಷ ಎಸ್.ಆರ್. ಸೋಮು, ಪ್ರಧಾನ ಕಾರ್ಯದರ್ಶಿ ಕಿಬ್ಬನಹಳ್ಳಿ ನರಸಿಂಹ, ಪದಾಧಿಕಾರಿಗಳಾದ ಸ.ನ. ಹೊನ್ನಪ್ಪ, ಎನ್. ವೇಣುಗೋಪಾಲ್, ಡಿ. ರಘು, ನಿರ್ದೇಶಕರಾದ ಡಿ. ಗೋವಿಂದರಾಜ್, ಸ.ನ. ಮೂರ್ತಿ, ಸೋಮಶೇಖರ್, ಎಸ್.ವೈ. ರಮೇಶ್, ಹನುಮಂತಪ್ಪ, ಡಿ.ಎಲ್. ಕೃಷ್ಣಮೂರ್ತಿ, ಆರ್. ಮೋಹನ್, ಹಸೂಡಿ ಕುಮಾರ್ ಮೊದಲಾದವರಿದ್ದರು.ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಮೀನಾಕ್ಷಿ ಗೋವಿಂದರಾಜ್ ಅವರನ್ನು ಸನ್ಮಾನಿಸಲಾಯಿತು.

ವರದಿ ಮಂಜುನಾಥ್ ಶೆಟ್ಟಿ…