ಶಿವಮೊಗ್ಗದ ಮಂಜಪ್ಪ ಜಿ 43 ವರ್ಷ ಮತ್ತು ಶ್ರೀಧರ 36 ವರ್ಷ ಕಲ್ಲಹಳ್ಳಿ ಹುಡ್ಕೋ ಶಿವಮೊಗ್ಗ ಇಬ್ಬರೂ ಸ್ನೆಹಿತರಾಗಿದ್ದು, ಮಂಜಪ್ಪನು ಶ್ರೀಧರನಿಗೆ 9 ಲಕ್ಷ ರೂ ಹಣವನ್ನು ಸಾಲವಾಗಿ ನೀಡಿದ್ದು ಹಿಂದಿರುಗಿ ನೀಡುವಂತೆ ಪದೇ ಪದೇ ಕೇಳಿದ್ದರಿಂದ ಆತ ವಾಪಸ್ ಕೊಡು ಕಾರಣ ದಿ:-16/02/2014 ರಂದು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಪಿಎಂಸಿ ಬಳಿ ಆರೋಪಿ ಶ್ರೀಧರನು ಮಂಜಪ್ಪನನ್ನು ಕರೆಸಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಚೀಲದಲ್ಲಿ ಕಟ್ಟಿ ಅಲ್ಲೇ ಹೂತು ಹಾಕಿ ಸಾಕ್ಷಿ ನಾಶ ಮಾಡಿದ್ದಾನೆ.

ಈ ಬಗ್ಗೆ ಗುನ್ನೆ ಸಂಖ್ಯೆ 0069/2014 ಕಲಂ 302 201 IPC ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.
ಶ್ರೀ ‌ಜಯರಾಜ್ ವೃತ್ತ ನೀರಿಕ್ಷಕರು ಕೋಟೆ ವೃತ್ತ ಮತ್ತು ಶ್ರೀ ಎಸ್ ಎಮ್ ಶಿವಕುಮಾರ್ ವೃತ್ತ ನಿರೀಕ್ಷಕರು ದೊಡ್ಡಪೇಟೆ ವೃತ್ತರವರ ತಂಡಗಳು ಸದರಿ ಪ್ರಕರಣ ತನಿಖೆ ಕೈಗೊಂಡು ದಿನಾಂಕ‌ 20-02-2014 ರಂದು ಆರೋಪಿಯನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.

ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶ್ರೀ ಜಿ ಮಧು ವಿಶೇಷ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದು ಆರೋಪಿಯ ವಿರುದ್ಧ ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶ್ರೀ ‌ಮಾನು, ಮಾನ್ಯ ನ್ಯಾಯಾದೀಶರು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ ರವರು ಆರೋಪಿತನಿಗೆ ದಿನಾಂಕ 10-02-2022 ರಂದು ಜೀವಾವಧಿ ಕಾರಾವಾಸ ಶಿಕ್ಷೆ ಮತ್ತು 250000/- ರೂಪಾಯಿಗಳ ದಂಡ ವಿದಿಸಿ ಆದೇಶಿಸಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ…