13/02/2022 ಭಾನುವಾರ ಬೆಳಗ್ಗೆ ಶಿವಮೊಗ್ಗ ನಗರದ, ಬಿ.ಹೆಚ್ ರಸ್ತೆಯ ಕರ್ನಾಟಕ ಸಂಘ ಪಕ್ಕದ ಸರ್ಕಾರಿ ಕನ್ನಡ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆ (ಮೈನ್ ಮಿಡ್ಲ್ ಸ್ಕೂಲ್) ಶಾಲೆಯ ಹಳೆಯ ವಿದ್ಯಾರ್ಥಿಗಳು ದಿನಾಂಕ: 05/02/2022 ಶನಿವಾರ ಬೆಳಗ್ಗೆ ಶಾಲೆಯಲ್ಲಿ ಸೇರಿ ಹಳೆ ವಿದ್ಯಾರ್ಥಿಗಳ ಸಂಘ ರಚನೆ ಮಾಡಿ ಉದ್ಘಾಟನೆ ಮಾಡಲಾಯಿತು.

ಕೆಲವು ಆಸಕ್ತ ಶಾಲೆಯ ಹಳೇಯ ವಿದ್ಯಾರ್ಥಿಗಳಿಗೆ ಅ ದಿನ ರಜೆ ಸಿಗದೇ ಕಾರಣ, ಸಂಘದ ಪದಾಧಿಕಾರಿಗಳನ್ನು ದಿ:13/02/22 ರಂದು ಆಯ್ಕೆ ಮಾಡಲು ತೀರ್ಮಾನಿಸಲಾಗಿತ್ತು. ಅದರಂತೆ ಇಂದು ಶಾಲೆಯ ಆಸಕ್ತ ಹಳೇ ವಿದ್ಯಾರ್ಥಿಗಳು ಶಾಲೆಯಲ್ಲಿ ಸೇರಿ‌ ಸರ್ಕಾರಿ ಶಾಲೆ ಉಳುವಿಗಾಗಿ ರಚನೆ ಮಾಡಿದ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ಉಪಾಧ್ಯಕ್ಷರಾಗಿ ಶ್ರೀ ಮೂರ್ತಿ ಎಂ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಪರಶುರಾಮ, ಕಾರ್ಯದರ್ಶಿ ಗಳಾಗಿ ಶ್ರೀ ಮತಿ ಸವಿತಾ, ಸಹ ಕಾರ್ಯದರ್ಶಿ ಶ್ರೀ ಮತಿ ಸುನೀತಾ‌ ಖಜಾಂಚಿಯಾಗಿ ಶ್ರೀ ಪ್ರಕಾಶ್, ನಿರ್ದೇಶಕರಾಗಿ ಶ್ರೀ ಯತೀಶ್, ಶ್ರೀ ರಾಮು, ಶ್ರೀ ದೇವರಾಜ್, ಶ್ರೀ ವಿಶ್ವನಾಥ್, ಶ್ರೀ ಚಂದ್ರನಾಯ್ಕ, ಶ್ರೀ ವಸಂತ ನಾಯ್ಕ, ಶ್ರೀ ಶಂಕರ್, ಶ್ರೀ ಚಂದ್ರು ಆಯ್ಕೆಯಾದರು.

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕಿಯಾದ ಶ್ರೀ ಮತಿ ಕವಿತ, ಶ್ರೀ ಮತಿ ಶಶಿವರ್ಣ, ಹಳೆಯ ವಿದ್ಯಾರ್ಥಿಗಳಾದ ಶ್ರೀ ಮತಿ ಅನುಪಮಾ, ಶ್ರೀ ಮತಿ ಭಾಗ್ಯವತಿ, ಶ್ರೀ ಮತಿ ಪುಷ್ಪಾವತಿ, ಶ್ರೀ ಮತಿ ಸವಿತಾ ಎಸ್, ಶ್ರೀ ಮತಿ ದೇವಕಿ, ಶ್ರೀ ಜಬೀಉಲ್ಲಾ, ಶ್ರೀ ರಾಘವೇಂದ್ರ, ಪರಮೇಶ್, ಶ್ರೀ ಗಂಗಾಧರ, ಶ್ರೀ ವಿಜಯ್, ಶ್ರೀ ಚಂದ್ರು, ಶ್ರೀ ಸುರೇಶ್ ಕೆ, ಶ್ರೀ ಬಸವರಾಜ್, ಶ್ರೀ ಸಮೀರ್ ಶಫೀ, ಶ್ರೀ ರವಿಕುಮಾರ್, ಶ್ರೀ ವೇಣು ಕುಮಾರ್, ಶ್ರೀ ಯಲ್ಲಪ್ಪ, ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…