ಶಿವಮೊಗ್ಗ: ಶಿವಮೊಗ್ಗ ಗೌಡ ಸಾರಸ್ವತ ಸಮಾಜದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಮಂದಿರದಲ್ಲಿ ಇಂದು ಶ್ರೀ ದೇವರ ದಶಮಾನೋತ್ಸವ ಪ್ರತಿಷ್ಠಾ ವರ್ಧಂತಿ ಇಂದು ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಅದ್ಧೂರಿಯಾಗಿ ನೆರವೇರಿತು.

ವಿಶೇಷ ಅಲಂಕಾರ, ಭಜನಾ ಕಾರ್ಯಕ್ರಮ, ಸಾಮೂಹಿಕ ಸತ್ಯನಾರಾಯಣ ಪೂಜೆ, ಪಲ್ಲಕ್ಕಿಯಲ್ಲಿ ಶ್ರೀ ದೇವರಿಗೆ ನಗರೋತ್ಸವ, ಅಷ್ಠೋವಧಾನ ಸೇವೆ, ವಸಂತೋತ್ಸವ, ಶತಕಲಶಾಭಿಷೇಕ ನಡೆಯಿತು. ಕಾರ್ಯಕ್ರಮದಲ್ಲಿ ಅಪಾರ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ವರದಿ ಮಂಜುನಾಥ್ ಶೆಟ್ಟಿ…