ಶಿವಮೊಗ್ಗ ನಗರದ ಸುಳೆಬೈಲು ಏಳನೇ ತಿರುವಿನಲ್ಲಿ ಕಳೆದ ರಾತ್ರಿ ಕೌಟುಂಬಿಕ ವೈಷಮ್ಯಕ್ಕೆ ಎರಡು ಕೊಲೆ ನಡೆದಿದೆ. ರಾತ್ರಿ 12 ಗಂಟೆ ಸಮಯದಲ್ಲಿ ಪರಸ್ಪರ ಕೌಟುಂಬಿಕ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿದ್ದು ನಂತರ ಕೊಲೆಯಾಗಿದೆ.

ಘಟನೆಯಲ್ಲಿ ಸಲೀಂ ಅಹ್ಮದ್ ಮತ್ತು ಅಬ್ದುಲ್ ಸಲ್ಮಾನ್ ಇಬ್ಬರು ಮೃತರಾಗಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ ಮಂಜುನಾಥ್ ಶೆಟ್ಟಿ…