ಶಿವಮೊಗ್ಗ ನಗರದ ಗೋಪಾಳದ ಪದ್ಮ ಟಾಕೀಸ್ ಬಳಿ ಸರ್ಕಾರಿ ಪ್ರಾಥಮಿಕ ಶಾಲೆ ಹತ್ತಿರ ಸಂಜೆ 6.30 ಕೆ ವಾಕಿಂಗ್ ತೆರಳುತ್ತಿದ್ದ ವೆಂಕಟೇಶ್ ಎಂಬ ವ್ಯಕ್ತಿಯ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲುತೂರಾಟ.

ಗಾಯಗೊಂಡ ವೆಂಕಟೇಶ್ ರವರನ್ನು ಕುಟುಂಬಸ್ಥರು ಜಿಲ್ಲಾ ಮೆಗ್ಗಾನ್ ಗೆ ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನಾ ಸ್ಥಳಕ್ಕೆ ತುಂಗಾ ನಗರ ಪೊಲೀಸರು ಆಗಮಿಸಿದ್ದಾರೆ.

ಆಸ್ಪತ್ರೆಗೆ ಎಸ್.ದತ್ತಾತ್ರಿ ಮತ್ತು ದೀನ್ ದಯಾಳ್ ಭೇಟಿ ನೀಡಿದ್ದಾರೆ. ಘಟನೆಗೆ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ.

ವರದಿ ಮಂಜುನಾಥ್ ಶೆಟ್ಟಿ…