ದಿನಾಂಕಃ-3-3-2022 ರಂದು ಸಂಜೆ 06-30 ಗಂಟೆಗೆ ತುಂಗಾನಗರ ಠಾಣಾ ವ್ಯಾಪ್ತಿಯ ಪದ್ಮಾ ಟಾಕೀಸ್ ಎದುರು ಗೋಪಾಳ ಶಿವಮೊಗ್ಗ ಟೌನ್ ನ ವಾಸಿಯೊಬ್ಬರು ತಮ್ಮ ನಾಯಿಯನ್ನು ಹಿಡಿದುಕೊಂಡು ವಾಕಿಂಗ್ ಗೆ ಹೋಗಿ ವಾಪಾಸ್ ಮನೆಗೆ ಹಿಂದಿರುಗುವಾಗ ವಿದ್ಯಾನಿಕೇತನ ಶಾಲೆಯ ಹತ್ತಿರ ಅವರಿಗೆ ಹಲ್ಲೆಯಾದ ಬಗ್ಗೆ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0100/2022 ಕಲಂ 504, 324, 307 ಸಹಿತ 34 ಐಪಿಸಿ ಮತ್ತು ಕಲಂ 3 (2) (v) the sc & st Amendment Act 2015 ರೀತ್ಯಾ ಪ್ರಕರಣ ದಾಖಲಿಸಿ, ಸದರಿ ಪ್ರಕರಣದ ಆರೋಪಿಗಳಾದ 1] ಸಲ್ಮಾನ್, 20 ವರ್ಷ, ಬಡಾವಣೆ ಶಿವಮೊಗ್ಗ ಟೌನ್ ಮತ್ತು 2) ಸೈಯದ್ ಸುಬಾನ್, 18 ವರ್ಷ, ಅಣ್ಣನಗರ, ಶಿವಮೊಗ್ಗ ಟೌನ್ ರವರುಗಳನ್ನು ವಶಕ್ಕೆ ಪಡೆದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿಗಳಾದ ಸಲ್ಮಾನ್, ಸೈಯ್ಯದ್ ಸುಬಾನ್ ಮತ್ತು ಅಸ್ಲಂ ರವರುಗಳು ಟಿಪ್ಪುನಗರದ ವೈನ್ ಶಾಪ್ ನಲ್ಲಿ ಕುಡಿದು ಹೊರಗೆ ಬಂದಾಗ ವೈನ್ ಶಾಪ್ ರಸ್ತೆಯಲ್ಲಿ ಎದುರುಗಡೆ ಬಂದ ಪರಿಚಯದ ಫೋಟೋ ಕ್ಯಾಮೆರಾ ಬಾಡಿಗೆಗೆ ಕೊಡುತ್ತಿದ್ದ ಚಿನ್ನು ಎಂಬಾತನೊಂದಿಗೆ ಫೋಟೋ ಕ್ಯಾಮೆರಾವನ್ನು ಬಾಡಿಗೆಗೆ ಕೊಡುವ ವಿಚಾರವಾಗಿ ಜಗಳ ಮಾಡಿಕೊಳ್ಳುತ್ತಿದ್ದು, ಅದೇ ಸಮಯಕ್ಕೆ ಪಿರ್ಯಾದುದಾರರು ವಿದ್ಯಾನಿಕೇತನ ಶಾಲೆಯ ಆವರಣದಿಂದ ನಾಯಿಯನ್ನು ಹಿಡಿದುಕೊಂಡು ಹೊರಗೆ ಬಂದಾಗ ಯಾಕೋ ನನ್ನನ್ನು ನೋಡುತ್ತೀಯ ಎಂದು ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕಲ್ಲಿನಿಂದ ತಲೆಗೆ ಹಲ್ಲೆ ಮಾಡಿರುವುದು ವಿಚಾರಣೆಯ ಸಮಯದಲ್ಲಿ ತಿಳಿದು ಬಂದಿರುತ್ತದೆ.

ವರದಿ ಮಂಜುನಾಥ್ ಶೆಟ್ಟಿ…