ಶಿವಮೊಗ್ಗ ನಗರದ ಹೆಸರಾಂತ ಹಾಗೂ ಯಶಸ್ವಿ ಉದ್ಯಮಿ, ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರು , ಮಥುರ ಗ್ರೂಪ್ ಆಫ್ ಹೊಟೇಲ್ಸ್ ನ ಮಾಲೀಕರು ಅದ ಶ್ರೀ ಎನ್ ಗೋಪಿನಾಥ್ ಅವರಿಗೆ ನಗರದ ಮಾಜಿ ಶಾಸಕರಾದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರು ಹುಟ್ಟು ಹಬ್ಬದ ದಿನದಂದು ಅಭಿನಂದಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಮಾಜಿ ಸದಸ್ಯರಾದ ದೀಪಕ್ ಸಿಂಗ್, ರಘು, ಶ್ಯಾಮ್ ಸುಂದರ್, ಆರ್ ಕೆ ಉಮೇಶ್ ಲಕ್ಷ್ಮಣ, ಕಾಂಗ್ರೆಸ್ ಮುಖಂಡರಾದ ಮಾಧವ್ ಮೂರ್ತಿ, ಪ್ರಸನ್ನ, ಸ್ವಾಮೀನಾಥ್, ದಯಾನಂದ್, ಷಣ್ಮುಖ, ವೆಂಕಟೇಶ್ ಮಂಜುನಾಥ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…