ಹೊಸನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮಲ್ಲಿಕಾರ್ಜುನ ಎಂಬುವವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಕಾಲೇಜಿನ ಶಿಕ್ಷಕರೊಬ್ಬರು ಬಾಸುಂಡೆ ಬರುವಂತೆ ಹಲ್ಲೆ ನಡೆಸಿರುವುದು ಅತ್ಯಂತ ಹೀನ ಮತ್ತು ಖಂಡನೀಯ ವಿಚಾರ.

ಹಲ್ಲೆ ಮಾಡಿದ ಮೇಲೆ ಪೊಲೀಸರಿಗೆ ದೂರು ನೀಡಲು ಹೋದ ವಿದ್ಯಾರ್ಥಿಗೆ ರಾಜಿ ಸಂಧಾನ ಮಾಡುವಂತೆ ಒತ್ತಾಯ ಮಾಡಿರುವುದು ಕೂಡ ಆಕ್ಷೇಪಾರ್ಹ ವಿಷಯ. ಇಷ್ಟಾದರೂ ಕಾಲೇಜಿನ ಶಿಕ್ಷಕರು, ಆಡಳಿತಮಂಡಳಿಯವರು ಮತ್ತು ಕ್ಷೇತ್ರದ ಶಾಸಕರು ಹಾಗೂ ಕಾಲೇಜಿನ ಅಧ್ಯಕ್ಷರಾದ ಹರತಾಳು ಹಾಲಪ್ಪನವರು ಇನ್ನೂ ಕೂಡ ಯಾವುದೇ ರೀತಿಯಲ್ಲೂ ಸ್ಪಂದನೆ ನೀಡಿರುವುದಿಲ್ಲ. ತಕ್ಷಣವೇ ಪೊಲೀಸರು ಈ ವಿಚಾರದಲ್ಲಿ ದೂರನ್ನು ದಾಖಲಿಸಿಕೊಂಡು ಶಿಕ್ಷಕರಾದ ಶಿವಮೂರ್ತಿ, ಗಣೇಶ್ ಐತಾಳ್, ಗಣೇಶ್ ಹಾಗೂ ರೂಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ ಸಿ ಎಂ ಚಿನ್ಮಯ್ ಜಿಲ್ಲಾಧ್ಯಕ್ಷರು ವಿದ್ಯಾರ್ಥಿ ಘಟಕ ಶಿವಮೊಗ್ಗ.