ಶಿವಮೊಗ್ಗ: ಜನರ ಪ್ರೀತಿ ವಿಶ್ವಾಸ, ಅಭಿಮಾನಕ್ಕೆ ನಾನು ಎಂದೆಂದೂ ಚಿರಋಣಿ ಎಂದು ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್ ಹೇಳಿದರು.

ಅವರು ಇಂದು ಬೆಳಿಗ್ಗೆ ಆಟೋ ಕಾಂಪ್ಲೆಕ್ಸ್ ಚೈತ್ರಶ್ವೇತ ಬಿಲ್ಡಿಂಗ್ ನಲ್ಲಿ ಸ್ನೇಹಮಹಿ ಸಂಘ ಮತ್ತು ಆಟೋ ಕಾಂಪ್ಲೆಕ್ಸ್ ಅಸೋಸಿಯೇಷನ್ ಮತ್ತು ಶ್ರೀಕಾಂತ್ ಅಭಿಮಾನಿಗಳಿಂದ ಇಂದು ಬೆಳಿಗ್ಗೆ 50 ನೇ ವರ್ಷದ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ನಂತರ ಮಾತನಾಡಿದರು.ಚುನಾವಣೆ ಒಂದು ಭಾಗ. ನಾನು ಒಬ್ಬ ಸಾಮಾನ್ಯ ಜನ ಸೇವಕ, ಸೇವೆಯೇ ನಮ್ಮ ಪ್ರಥಮ ಗುರಿಯಾಗಬೇಕು. ಮನುಷ್ಯ ಎಲ್ಲಾ ದ್ವೇಷ ಅಸೂಯೆಗಳನ್ನು ಬಿಟ್ಟು ಬಾಳಬೇಕು. ಮಾನವೀಯತೆಯೇ ಇಂದು ಈ ಎಲ್ಲದಕ್ಕಿಂತ ದೊಡ್ಡದು ಎಂದರು.

ಸ್ನೇಹಮಹಿ ಸಂಘದ ಅಧ್ಯಕ್ಷ ಚಿನ್ನಪ್ಪ ಮಾತನಾಡಿ, ಶ್ರೀಕಾಂತ್ ಬಡವರ ದ್ವನಿ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿ. ಜೊತೆಗೆ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಹತ್ತಿರವಿರುವ ವಿಶೇಷ ಸ್ನೇಹಿತ ಹಾಗೂ ರಾಜಕಾರಣಿ. ಅವರಿಗೆ ಆರೋಗ್ಯ, ಆಯಸ್ಸು ಹೆಚ್ಚಿಸಲಿ ಹಾಗೂ ಸಮಾಜ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿದರು.ಆಟೋ ಕಾಂಪ್ಲೆಕ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜಿ.ಎನ್. ಮೂರ್ತಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ಬಿ. ಪೂಸ್ವಾಮಿ, ಹರೀಶ್, ಆಂಡವರ್, ಚಿನ್ನಪ್ಪ, ಶಿವಾನಂದ್, ಶ್ಯಾಮ್, ವೆಂಕಟೇಶ್, ಸೋಮಣ್ಣ, ದೇವರಾಜ್, ರಘು, ಸಚಿನ್, ಅಬ್ದುಲ್ ರೂಭ, ಗೋವಿಂದರಾಜು, ರವಿಕುಮಾರ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…