ಶಿವಮೊಗ್ಗ: ಪುರಾಣ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆಗೆ ಇಂದು ಕೊನೆಯ ದಿನವಾಗಿದ್ದು, ಎಮದಿನಂತೆ ಭಕ್ತ ಸಾಗರ ದೇವಿಯ ದರ್ಶನ ಪಡೆಡುಕೊಂಡಿದೆ.ನಿನ್ನೆ ಶುಕ್ರವಾರ ಮಹಿಳೆಯರು, ಮಕ್ಕಳು, ಕುಟುಂಬ ವರ್ಗದವರು, ನೆಂಟರಿಷ್ಟರು ಅಪಾರ ಸಂಖ್ಯೆಯಲ್ಲಿ ದರ್ಶನಕ್ಕೆ ಆಗಮಿಸಿದ್ದು, ಕಂಡು ಬಂದಿತ್ತು. ನಿನ್ನೆ ವಿಶೇಷ ಪೂಜೆಗಳು ನಡೆದವು.ಇಂದು ಕೊನೆಯ ದಿನವಾಗಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಹರಕೆ, ಪೂಜೆ, ಪ್ರಸಾದ ವಿನಿಯೋ ಹಾಗೂ ವಿಶೇಷ ಅಲಂಕಾರ ಮಾಡಲಾಗಿದ್ದು, ಅಪಾರ ಸಂಖ್ಯೆಯ ಭಕ್ತದರು ದೇವಿಯ ದರ್ಶನ ಪಡೆದು ಪುನೀತರಾದರು.

ಇಂದು ರಾತ್ರಿ 8 ಗಂಟೆಗೆ ಅಮ್ಮನವರ ರಾಜಬೀದಿ ಉತ್ಸವ ನಡೆಯಲಿದೆ. ಗಾಂಧಿ ಬಜಾರ್ ಮೂಲಕ ಸಾಗಿ ಹೊನ್ನಾಳಿ ರಸ್ತೆ ಸೇತುವೆ ಮೂಲಕ ಅರಣ್ಯದಲ್ಲಿ ದೇವಿಯ ಮೂರ್ತಿ ವಿಸರ್ಜಿಸುವುದರೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.ಗಣ್ಯರಿಂದ ದೇವಿ ದರ್ಶನ:ಶ್ರೀ ಆನಂದ ಗುರೂಜಿ, ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಹಲವು ಗಣ್ಯರು ಇಂದು ದೇವಿಯ ದರ್ಶನ ಪಡೆದು ಪುನೀತರಾದರು. 

ವರದಿ ಮಂಜುನಾಥ್ ಶೆಟ್ಟಿ…