ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರು ಈ ವರ್ಷ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ವಿಭಾಗದಲ್ಲಿ, ಶಿವಮೊಗ್ಗ ನಗರದ ಗೋಪಾಳದ ಪ್ರೆಸ್ ಕಾಲೋನಿಯ ‘ಸ್ವರಾತ್ಮಿಕಾ ಸಂಗೀತ ವಿದ್ಯಾಲಯ’ದ ವಿದ್ಯಾರ್ಥಿ ಚಿ. ಪೂಜಿತ್ ತೇಜಸ್ವಿಯು ಶೇಕಡಾ 91 ಅಂಕಗಳನ್ನು ಪಡೆಯುವುದರ ಮೂಲಕ ಶಿವಮೊಗ್ಗ ಜಿಲ್ಲಾ ಬೋರ್ಡ್ ಗೆ ಪ್ರಥಮ ರಾಂಕ್ ಗಳಿಸಿದ್ದಾನೆ.

ಈ ವಿದ್ಯಾರ್ಥಿಯು ಶ್ರೀಮತಿ ರಾಜಲಕ್ಷ್ಮೀ ಕೋಡ್ನಾಡ್ ಅವರ ಶಿಷ್ಯನಾಗಿದ್ದು, Dr. ತೇಜಸ್ವಿ ಹಾಗೂ ಸುಮಾ ತೇಜಸ್ವಿ ಯವರ ಸುಪುತ್ರ. ಸನ್ಮಾನ್ಯ ಸಚಿವರಾದ ಕೆ.ಎಸ್ ಈಶ್ವರಪ್ಪನವರ ಮೊಮ್ಮಗನಾದ ಈ ವಿದ್ಯಾರ್ಥಿಗೆ ಸಂಗೀತದ ಗುರು ಶ್ರೀಮತಿ ರಾಜಲಕ್ಷ್ಮೀ ಹಾಗೂ ಸಂಗೀತ ಶಾಲೆಯ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…