ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಪಾರ್ಕ್ ದತ್ತು ಪಡೆಯಲಾಯಿತು, ಸಂಜೆ ಕಾಮರ್ಸ್ ಚೇಂಬರ್ ಹಾಲ್ನಲ್ಲಿ ಮಂಗಳಮುಖಿಯರ ವಿಶೇಷ ಕಾರ್ಯಕ್ರಮ ಮತ್ತು ಹೊಸ ಘಟಕ ಜೆಸಿಐ ಶಿವಮೊಗ್ಗ ಶ್ರೀರಕ್ಷೆ ಯ ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.


ನಗರದ l.b.s. ಬಡಾವಣೆಯಲ್ಲಿ ಉದ್ಯಾನವನವನ್ನು ದತ್ತು ಪಡೆಯುವ ಕಾರ್ಯಕ್ರಮ ಜರುಗಿತ್ತು. ಬಡಾವಣೆಯ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವಾಸ್ ಅವರು ಕಾರ್ಯಕ್ರಮ ಉದ್ಘಾಟಿಸಿ ಜೆಸಿ ಸಂಸ್ಥೆಗಳಿಂದ ಸಮಾಜಮುಖಿ ಕಾರ್ಯಕ್ರಮ ಹೀಗೆ ಮುಂದುವರೆಯಲಿ ಉದ್ಯಾನವನದ ಅಭಿವೃದ್ಧಿ ನಿರಂತರವಾಗಿ ನಡೆಯಲಿ ಎಂದು ಶುಭಕೋರಿದರು. ಈ ಸಂದರ್ಭದಲ್ಲಿ ಜೆಸಿಎನ್ ಶ್ರೀಕಾಂತ್ ಅವರು, ಜಿಲ್ಲಾ ನ್ಯಾಯಾಧೀಶರನ್ನು ಸೆಲ್ವ ಕುಮಾರ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಜೆಸಿಐ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಚೇಂಬರ್ ಆಫ್ ಕಾಮರ್ಸ್ ಹಾಲ್ನಲ್ಲಿ ಮಂಗಳಮುಖಿಯರ ವಿಶೇಷ ಪರಿಚಯ ಅವರ ಸಂಸ್ಕೃತಿ ಹಾಗೂ ಅವರನ್ನು ಬಲಪಡಿಸುವ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಂಗಗಳಲ್ಲಿ ಭಾಗವಹಿಸಿ ಉತ್ತಮ ಸ್ಥಾನಕ್ಕೆ ತಲುಪಲು ಜೆಸಿಐ ನಾ ಸವಿತಾ ರಮೇಶ್ ಅವರು ತಮ್ಮ ಭಾಷಣದ ಮೂಲಕ ಮಂಗಳಮುಖಿಯರ ಮನಸ್ಥೈರ್ಯವನ್ನು ಹೆಚ್ಚಿಸಿದರು.
ಜೆಸಿಐ ಶಿವಮೊಗ್ಗ ಶ್ರೀರಕ್ಷೆ ಹೊಸ ಘಟಕ ಅರ್ಜುನ್ ಪಂಡಿತ್ ಅಧ್ಯಕ್ಷತೆಯಲ್ಲಿ, ಮಂಜುನಾಥ್ ಕಾರ್ಯದರ್ಶಿಗಳಾಗಿ ಹಾಗೂ ಇತರೆ ಸದಸ್ಯರು , ಪದಗ್ರಹಣ ಮಾಡಿದರು. ಜೆಸಿಐ ಶಿವಮೊಗ್ಗ ಶರಾವತಿ ಎಲ್ಲ ಕಾರ್ಯಕ್ರಮದ ನಿರ್ವಹಣೆ ಮಾಡಿದರು.

ಅಧ್ಯಕ್ಷರಾದ ಜ್ಯೋತಿ ಅರಳಪ್ಪ ಮತ್ತು ಕಾರ್ಯದರ್ಶಿಗಳಾದ ಮಮತಾ ಶಿವಣ್ಣ ಜೋನ್ ಪ್ರೆಸಿಡೆಂಟ್ ಜೆಸಿ ದೀಪಿಕಾ n ಬಿದರಿ, ನೊಮ್ coordinator ಜೆಸಿಐ ಪಿಪಿಪಿ ಸವಿತಾ ರಮೇಶ್ , ಜೋನ್ ಉಪಾಧ್ಯಕ್ಷ ಜೆಸಿ ಚೆನ್ನ ವೀರೇಶ್, ಮುಖ್ಯ ಅತಿಥಿಗಳಾದ ಜೆಸಿ ಎಂ ಶ್ರೀಕಾಂತ್, ಫೌಂಡರ್ ಪ್ರೆಸಿಡೆಂಟ್ ಜೆಸಿ ಜ್ಯೋತಿ ಅರಳಪ್ಪ, ಪಸ್ಟ್ ಪ್ರೆಸಿಡೆಂಟ್ ಜೆಸಿ ಗಾರ ಶ್ರೀನಿವಾಸ್, ಐ ಪಿ ಪಿ ಜೆಸಿ ಮೋಹನ್ ಹಾಗೂ ನಗರದ ಎಂಟು ಲೋಕಲ್ ಆರ್ಗನೈಜೆಶನ್ ಅಧ್ಯಕ್ಷರುಗಳು ಮತ್ತು ಜೆಸಿಐ ಶಿವಮೊಗ್ಗ ಶರಾವತಿ ಕುಟುಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಧ್ಯಕ್ಷರಾದ ಜ್ಯೋತಿ ಅರಳಪ್ಪ ಮತ್ತು ಕಾರ್ಯದರ್ಶಿಗಳಾದ ಮಮತಾ ಶಿವಣ್ಣ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಜೆಸಿಬಿ ಎಲ್ಲಾ ಸದಸ್ಯರಿಗೂ ಪದಾಧಿಕಾರಿಗಳಿಗೂ ಧನ್ಯವಾದ ತಿಳಿಸಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ…