ಪುತ್ತೂರು ನ್ಯೂಸ್…

ಜಯಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕಾರಿಣಿ ಸಭೆ ಪುತ್ತೂರಿನ ಉರಮಾಲು ಗುತ್ತು ಮನೆಯಲ್ಲಿ ನಡೆಯಿತು.

ಯುವ ಸಂಸ್ಥಾಪಕ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರವೀಣ್ ಶೆಟ್ಟಿ ಯವರನ್ನು ಕಲ್ಪವೃಕ್ಷ ಗಿಡವನ್ನು ನೀಡಿ ಅಭಿನಂದಿಸಿದರು.

ಸಭೆಯಲ್ಲಿ ನೂತನ ಉಸ್ತುವಾರಿಗಳನ್ನು ಆಯ್ಕೆ ಮಾಡಲಾಯಿತು.ಪುತ್ತೂರು ತಾಲೂಕು ಉಸ್ತುವಾರಿಯಾಗಿ ದೀಪಕ್ ಅಮೀನ್, ಬಂಟ್ವಾಳ ತಾಲೂಕಿನ ಉಸ್ತುವಾರಿಯಾಗಿ ಜಗನ್ನಾಥ ರೈ ಬಿ. ಸಿ ರೋಡ್, ಸುಳ್ಯ ತಾಲೂಕಿನ ಉಸ್ತುವಾರಿಯಾಗಿ ಕಾರ್ತಿಕ್ ರೈ, ವಿಟ್ಲ ಘಟಕದ ಉಸ್ತುವಾರಿಯಾಗಿ ತಿಲಕ್ ರಾಜ್ ಶೆಟ್ಟಿ ಇವರನ್ನು ಆಯ್ಕೆ ಮಾಡಲಾಯಿತು.

ನೂತನ ಉಸ್ತುವಾರಿಗಳಿಗೆ ಮತ್ತು ಪದಾಧಿಕಾರಿಗಳಿಗೆ ಯುವಸಂಸ್ಥಾಪಕ ಅಧ್ಯಕ್ಷರಾದ ಗುಣರಂಜನ್ ಶೆಟ್ಟಿ ಯವರು ಪುಷ್ಪ ನೀಡಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸಂಚಾಲಕರಾದ ಪ್ರಕಾಶ್ ಟಿ., ರಾಮ್ ದಾಸ್ ಶೆಟ್ಟಿ, ಬೆಂಗಳೂರು ಜಿಲ್ಲಾಧ್ಯಕ್ಷರು ಮತ್ತು ರಾಜ್ಯ ಆಡಳಿತ ಮುಖ್ಯಸ್ಥರಾದ ಶ್ರೀನಿವಾಸ್ ಜೆ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…