ಶಿವಮೊಗ್ಗದ ಮಂಡಗದ್ದೆ ಹೋಬಳಿಯ 15ನೇ ಮೈಲಿಗಲ್ ದಟ್ಟ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ತಳಲಿ ಎಂಬ ಹತ್ತಳ್ಳಿ ವೃತ್ತದಲ್ಲಿ ಹಾದು ಹೋಗುವ ಕೀಗಡಿ ಗ್ರಾಮದಲ್ಲಿ ನಿನ್ನೆ ದಿನ ಮದ್ಯ ರಾತ್ರಿ ಆನಂದ್ ಎಂಬ ವ್ಯಕ್ತಿಯು ಕಂಠಪೂರ್ತಿ ಕುಡಿದು ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ದುರದೃಷ್ಟಕರ ಘಟನೆ ನಡೆದಿದೆ.
ಆನಂದ್ ಎಂಬುವನ ಹಿನ್ನೆಲೆಯನ್ನು ನೋಡುವುದಾದರೆ ಈತನು ಕಾಡುಗಳ್ಳತನದಲ್ಲಿ ಅರಣ್ಯ ಇಲಾಖೆಗೆ ಬೇಕಾಗಿರುವ ವ್ಯಕ್ತಿಯಾಗಿದ್ದು ಕ್ರಿಮಿನಲ್ ಬ್ಯಾಕಗ್ರೌಂಡ್ ಹೊಂದಿದ್ದಾನೆ. ಈ ಹಿಂದೆ ಕೂಡ ಜಾಗದ ವಿಷಯದಲ್ಲಿ ಸುನಂದಮ್ಮ ಎಂಬಾಕೆಯ ಮಗನ ಆತ್ಮಹತ್ಯೆ ಕೇಸ್ ನಲ್ಲಿ ಕೂಡ ಆನಂದನ್ ಹೆಸರು ತಳುಕು ಹಾಕಿಕೊಂಡಿದೆ. ಇದು ಪ್ರೇರೇಪಿತ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಸಂಶಯ ಇನ್ನೂ ಜನರ ಮನಸ್ಸಿನಲ್ಲಿ ಹಾಗೇಯೆ ಇದೆ. ಪೊಲೀಸ್ ಇಲಾಖೆಯು ಈತನನ್ನು ಕೃಷ್ಣ ಜನ್ಮಸ್ಥಳಕ್ಕೆ ಕಳಿಸುವಲ್ಲಿ ಸಫಲವಾಗುವುದೇ ಎಂದು ಕಾದು ನೋಡಬೇಕಿದೆ

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153