ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸೇವಾ ಭಾರತಿ ಆಂಗ್ಲ ಮಾಧ್ಯಮ ಪಾಠ ಶಾಲೆಯಲ್ಲಿ ಓದುತ್ತಿರುವ ಕನ್ನಿಕಾ. ಜಿ. ಶೆಟ್ಟಿ ಏಳನೇ ತರಗತಿಯ 2021-22 ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಕನ್ನಿಕಾ ಶೆಟ್ಟಿ ರವರ ತಂದೆ ಗಿರೀಶ ಶೆಟ್ಟಿ ಪತ್ರಿಕಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಗಿರೀಶ್ ಶೆಟ್ಟಿ ಯು ಇತಿಹಾಸವುಳ್ಳ ಶ್ರೀರಾಮೇಶ್ವರ ದೇವಸ್ಥಾನದ ಅನ್ನದಾಸೋಹ ಸಮಿತಿಯಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಈ ಹೆಮ್ಮೆಯ ವಿದ್ಯಾರ್ಥಿನಿಗೆ ತೀರ್ಥಹಳ್ಳಿ ಬಂಟರ ಸಂಘ ಶುಭ ಹಾರೈಸುತ್ತದೆ. ಜೊತೆಗೆ ತೀರ್ಥಹಳ್ಳಿ ಪತ್ರಕರ್ತರ ಸಂಘ ಅಭಿನಂದಿಸುತ್ತದೆ.

ವರದಿ ಮಂಜುನಾಥ್ ಶೆಟ್ಟಿ…