ಶಿವಮೊಗ್ಗ: ಡಾ.ಬಿ.ಆರ್.ಅಂಬೇಡ್ಕರ್ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ನಡೆದು, ಸಂಘದ ಅಧ್ಯಕ್ಷರಾಗಿ ಎಸ್. ನಾಗರಾಜ್. ಉಪಾಧ್ಯಕ್ಷರಾಗಿ ಜಿ.ಎಂ. ಸುರೇಶ್ ಬಾಬು ಅವಿರೋದವಾಗಿ ಆಯ್ಕೆಯಾದರು.

ಸಂಘದ ನಿರ್ದೇಶಕರಾಗಿ ಹೆಚ್.ಎನ್. ಮಂಜುನಾಥ್, ಬಿ.ಎನ್. ರಾಜಣ್ಣ, ಮಂಜಪ್ಪ, ಮೋಹನ್, ಎನ್.ವಿ. ಶ್ರೀಧರ್, ಕೆ. ಅಣ್ಣಪ್ಪ, ಮಹಿಳಾ ಮೀಸಲು ಕ್ಷೇತ್ರದ ಕವಿತಾ, ಹೆಚ್.ಬಿ. ನೇತ್ರಾವತಿ ಆಯ್ಕೆಯಾಗಿದ್ದಾರೆ. ಚುನಾವಣೆಯನ್ನು ಸಂಘದ ಚುನಾವಣಾ ಅಧಿಕಾರಿ ಸೋಮಲ್ ಜಾಧವ್ ನಡಸಿಕೊಟ್ಟು ಫಲಿತಾಂಶ ಪ್ರಕಟಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…