ಆಗುಂಬೆ ನ್ಯೂಸ್…

ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ(ಆಗುಂಬೆ)ಮಹಾ ಶಕ್ತಿ ಕೇಂದ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಂಬರೀಶ್ ಮಳಲಿ ಅಧ್ಯಕ್ಷತೆಯಲ್ಲಿ ಇಂದು ಆಗುಂಬೆ ಅರಣ್ಯ ಇಲಾಖೆಯ ಗೇಟ್ ಬಳಿಯಿಂದ ಶಿವಮೊಗ್ಗ ವಿಭಾಗದ ಏಳು ಸುತ್ತುಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು.

ಸುಮಾರು 5 ತ್ಯಾಜ್ಯ ನಿರ್ವಹಣ ವಾಹನಗಳಷ್ಟು ,ರಸ್ತೆ ಬದಿ ಎಸಿದಿದ್ದಂತಹ ಪ್ಲಾಸ್ಟಿಕ್,ಬಾಟಲಿಗಳು ಇತರೆ ತ್ಯಾಜ್ಯಗಳನ್ನು ತ್ಯಾಜ ವಿಲೇವಾರಿ ಸ್ಥಳಕ್ಕೆ ತಲುಪಿಸಲಾಯಿತು.ಸ್ವಚ್ಛತೆಯ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿಯ ಪ್ಲೇ ಕಾರ್ಡ್ ಪ್ರದರ್ಶನದೊಂದಿಗೆ ವಾಹನ ಸವಾರರಿಗೆ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂ.ಬಿ.ಹರಿಕೃಷ್ಣ ಕರ್ನಾಟಕ ಸರ್ಕಾರದ ಸಹಕಾರ ರತ್ನ ಪುರಸ್ಕೃತರಾದ ನಾಗರಾಜ ಶೆಟ್ಟಿ,ಆಗುಂಬೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಹಸಿರುಮನೆ ನಂದನ್,ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ರಕ್ಷಿತ್ ಮೇಗರವಳ್ಳಿ,ತಾಲೂಕು ಬಿಜೆಪಿ ಕಾರ್ಯದರ್ಶಿ ಪ್ರಶಾಂತ್ ಕುಕ್ಕೆ,ತಾಲೂಕು ಯುವ ಮೋರ್ಚಾ ಅಧ್ಯಕ್ಷರಾದ ಜಿ.ಕೆ.ಸಂದೀಪ್ ಭಟ್,ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಹಳ್ಳದಬೈಲ್, ಯಶಸ್ವಿ ಕಡ್ತೂರ್,ಮಹಾಶಕ್ತಿ ಕೇಂದ್ರ ಯುವಮೋರ್ಚಾ ಪ್ರಧಾನಕಾರ್ಯದರ್ಶಿಗಳಾದ ವಿನಯ್ ಮಾಕೊಡು,ಸೌಳಿ ಸುಬ್ರಮಣ್ಯ,ತಾಲೂಕು ಸ್ವಚ್ಛ ಭಾರತ್ ಸಂಚಾಲಕ ವಸಂತ್ ತುಡ್ಕಿ.

ಆಗುಂಬೆ ಪಂಚಾಯ್ತಿ ಉಪಾಧ್ಯಕ್ಷರಾದ ರಾಘವೇಂದ್ರ,ಹೊನ್ನೆತಾಳು ಕೃಷಿ ಸಹಕಾರ ಪತ್ತಿನ ಅಧ್ಯಕ್ಷರಾದ ರವೀಶ್ ಚಂಗಾರ್,ಹೆಗ್ಗೋಡು ಗ್ರಾ ಪಂ ಉಪಾಧ್ಯಕ್ಷರಾದ ಪ್ರದೀಪ್ ಗುಡ್ಡೇಕೊಪ್ಪ ,ತಾಲೂಕು ಯುವಮೋರ್ಚಾ ಉಪಾಧ್ಯಕ್ಷ ರವಿ ಆನಂದೂರು,ಕಾರ್ಯದರ್ಶಿ ಗುರುಪ್ರಸಾದ್ ಚಂಗಾರು, ಅಭಿ ಕೈಮರ,ಸಹ ಕಾರ್ಯದರ್ಶಿ ಅಭಿ ಕೊಂಡ್ಳೂರು, ಸದಸ್ಯ ಆದಿತ್ಯ ಬಾಳೆಬೈಲ್,ಅಕ್ಷತ್ ಹೊಸೂರು,ಪ್ರಮುಖರಾದ ಅಶ್ವಥ್ ಆಗುಂಬೆ, ಸುದೀಪ್ ಕರೆಕುಂಬ್ರಿ,ನಾಲೂರು ಪಂಚಾಯ್ತಿ ಸದಸ್ಯ ಮೋಹನ್, ಚೇತನ ಮನಸಗಾರು,ಆರುಣ್ ಶೆಟ್ಟಿ ಗಣೇಶ್ ಹಳ್ಳಿಬಿದರಗೋದು,ಸುದರ್ಶನ್ ಬಾಳೆಕೊಪ್ಪ, ಕಿರಣ್ ಸೌಳಿ,ಮಹೇಶ್ ಹೊಸಂಗಡಿ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಯಿತು. ಜೊತೆಯಲ್ಲಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಆಗುಂಬೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾದ ಶ್ರೀಯುತ ಶಿವಕುಮಾರ್ ರವರಿಗೆ ವಂದನೆಗಳನ್ನು ತಿಳಿಸಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ…