ಶಿವಮೊಗ್ಗ: ಅಡುಗೆ ಮನೆಯ ಕಪಾಟಿನಲ್ಲಿ ಅಡಗಿಕೊಂಡಿದ್ದ ನಾಗರಹಾವನ್ನು ಸ್ನೇಕ್ ಕಿರಣ್ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.ನಗರದ ಚಾಲುಕ್ಯ ನಗರ ಬಡಾವಣೆಯ ಮಂಜುನಾಥ್ ಅವರ ಮನೆಯಲ್ಲಿ ಹಾವು ಕಾಣಿಸಿಕೊಂಡಿದ್ದು, ಮನೆಯವರಲ್ಲಿ ಆತಂಕ ಮೂಡಿಸಿತ್ತು.

ಇಂದು ಬೆಳಗ್ಗೆ ಸೆಲ್ಫ್ ಕೆಳಭಾಗದ ಪಾತ್ರೆಗಳನ್ನು ಇಡುವ ಕಪಾಟಿನಲ್ಲಿದ್ದ ನಾಗರಹಾವನ್ನು ಕಂಡ ಮನೆಯವರು ಸ್ನೇಕ್ ಕಿರಣ್ ಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಸುಮಾರು ಮೂರುವರೆ ಅಡಿ ಉದ್ದದ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…