ಇತ್ತೀಚೆಗೆ ಹೊಸನಗರ ಪ.ಪಂ ವತಿಯಿಂದ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಬಡವರಿಗೆ ಶಾಸಕರಾದ ಹೆಚ್.ಹಾಲಪ್ಪ ನವರು ಪಡಿತರ ಕಿಟ್ ವಿತರಿಸಿದ್ದನ್ನು ಸಹಿಸಲಾಗದೆ, ಕಾಂಗ್ರೆಸ್, ಜೆ.ಡಿ.ಎಸ್ ನ ಕೆಲ ಸದಸ್ಯರು ಪ.ಪಂ ಮುಖ್ಯಾಧಿಕಾರಿಗಳಿಗೆ ದಮಕಿ ಹಾಕಿ ಗಲಾಟೆ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ.

ಇಂದು (21-06-2021) ಶಾಸಕರಾದ ಹೆಚ್.ಹಾಲಪ್ಪ ನವರು, ಹೊಸನಗರ ಪ.ಪಂ ಭೇಟಿ ನೀಡಿ, ಕಾಂಗ್ರೇಸ್, ಜೆ.ಡಿ.ಎಸ್ ನಾಯಕರ ಬಡವರ ವಿರೋಧಿ ನಿಲುವನ್ನು ಖಂಡಿಸಿ ಮಾತನಾಡಿ, ಇಂತಹ ಗೊಡ್ಡು ಬೆದರಿಕೆಗಳಿಗೆ ಅಧಿಕಾರಿಗಳು ಭಯ ಪಡಬೇಡಿ, ಅರ್ಹ ಬಡವರಿಗೆ ಪಡಿತರ ಕಿಟ್ ವಿತರಿಸಿರುವ ಬಗ್ಗೆ ಸೂಕ್ತ ದಾಖಲೆ ಇದೆ, ಕುತಂತ್ರ ಮಾಡುವ ಕಾಂಗ್ರೆಸ್ ನವರಿಗೆ ದಾಖಲೆ ಸಮೇತ ವರದಿ ನೀಡುತ್ತೇನೆ ಎಂದರು. ಪ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬಿಜೆಪಿ ಜಿಲ್ಲಾಧ್ಯಕ್ಷರು, ತಾ. ಅಧ್ಯಕ್ಷರು, ಪಕ್ಷದ ವಿವಿಧ ಹಂತದ ನಾಯಕರು ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153