ಶಿವಮೊಗ್ಗ ಮಹಾನಗರಪಾಲಿಕೆ ವತಿಯಿಂದ ಘನತ್ಯಾಜ್ಯ ವಿಲೇವಾರಿ ಹಾಗೂ ಒಳಚರಂಡಿ ಶುದ್ದೀಕರಣದ ಉಪಯೋಗಕ್ಕಾಗಿ ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ಖರೀದಿಸಲಾದ ವಾಹನಗಳಿಗೆ ಇಂದು ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ಉಪ ಮಹಾಪೌರರಾದ ಶಂಕರ್ ಗನ್ನಿ, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಚಾಲನೆ ನೀಡಿದರು.

ಬ್ಯಾಟರಿಚಾಲಿತ ಲಘು ಘನತ್ಯಾಜ್ಯ ವಿಲೇವಾರಿ ಆಟೋಗಳು 06, ಯುಜಿ.ಡಿ(ಒಳಚರಂಡಿ)ಸಕ್ಕಿಂಗ್ ಕಂ ಜಟ್ಟಿಂಗ್ ಮಿಷನ್ 02 ಮತ್ತು 6 ಕ್ಯೂಬಿಕ್ ಸಾಮಥ್ರ್ಯದ ಟಿಪ್ಪರ್ ಲಾರಿಗಳು 05 ಒಟ್ಟು 13 ವಾಹನಗಳಿಗೆ ಚಾಲನೆ ನೀಡಲಾಗಿದ್ದು, ಈ ವಾಹನಗಳು ನಗರದಾದ್ಯಂತ ಇಂದಿನಿಂದಲೇ ಕಾರ್ಯಾರಂಭ ಮಾಡಲಿವೆ ಎಂದು ಪಾಲಿಕೆ ಮಹಾಪೌರರು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…