ಶಿವಮೊಗ್ಗ: ರಾಜ್ಯದ ವಿವಿಧ ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹದಳ(ಎಸಿಬಿ) ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆ ಬಾಗಿಲು ಬಡಿದಿದ್ದಾರೆ. ರಾಜ್ಯದ 21 ಅಧಿಕಾರಿಗಳಿಗೆ ಸೇರಿ 80 ಸ್ಥಳಗಳಲ್ಲಿ ಸುಮಾರು 400 ಕ್ಕೂ ಅಧಿಕ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಸುಖನಿದ್ರೆಯಲ್ಲಿದ್ದ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.

ಶಿವಮೊಗ್ಗದ ಎಲ್.ಬಿ.ಎಸ್. ನಗರದ ಮೊದಲ ತಿರುವಿನಲ್ಲಿರುವ ಡಿಸಿಇ -ಎಲೆಕ್ಟ್ರಿಕಲ್ ಉಪ ಆಯುಕ್ತರ ಕಚೇರಿಯ ನಿರೀಕ್ಷಕ ಸಿದ್ದಪ್ಪ ಅವರ ‘ಶಿವಶಂಕರ’ ನಿವಾಸದ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ.ಶಿವಮೊಗ್ಗದ ಎಸಿಬಿ ಇನ್ಸ್ ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ಬೆಳಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿದ್ದು, ಸಿದ್ದಪ್ಪ ಅವರಿಗೆ ಸೇರಿದ ಹೊನ್ನಾಳಿಯ ಮನೆ, 10 ಎಕರೆ ಜಮೀನು ಹೊಂದಿರುವ ಮಾಹಿತಿಯನ್ನು ಅಧಿಕಾರಿಗಳು ಪಡೆದಿದ್ದು, ಪರಿಶೀಲನೆ ಮುಂದುವರೆದಿದೆ.

ವರದಿ ಮಂಜುನಾಥ್ ಶೆಟ್ಟಿ…