ಜಯಕರ್ನಾಟಕ ಜನಪರ ವೇದಿಕೆ ಶಿವಮೊಗ್ಗ ಘಟಕ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಜಯ ಕರ್ನಾಟಕ ಜನಪದ ವೇದಿಕೆ ಯುವ ಸಂಸ್ಥಾಪಕ ಅಧ್ಯಕ್ಷರಾದ ಬಿ ಗುಣರಂಜನ್ ಶೆಟ್ಟಿ ರವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಪೊಲೀಸ್ ಉನ್ನತ ಅಧಿಕಾರಿಗಳ ಮಾಹಿತಿ ಮೇರೆಗೆ ಹಾಗೂ ಮಾಧ್ಯಮ ಗಳಲ್ಲಿ ಇದರ ಬಗ್ಗೆ ಪ್ರಸಾರ ಆದಾಗಿನಿಂದ ಗುಣ ರಂಜನ್ ಶೆಟ್ಟಿ ಅಭಿಮಾನಿಗಳು ಆತಂಕ ಆರಂಭಿಸಿದೆ.ನಾಡು ನುಡಿ ಸೇರಿದಂತೆ ಪರಿಸರ ಪ್ರೇಮಿ ಹಾಗೂ ಸಮಾಜ ಸೇವೆ ಯಲ್ಲಿರುವ ಗುಣರಂಜನ್ ಶೆಟ್ಟಿ ರವರು ರಾಜ್ಯ ದಲ್ಲಿ ವಿಶಿಷ್ಟ ಸೇವೆಗಳಿಂದ ಗುರುತಿಸಿಕೊಂಡು ಬಂದವರು. ಕೂಡಲೇ ಸಂಭಡಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸ ಗುಣರಂಜನ್ ಶೆಟ್ಟಿ ರವರಿಗೆ ಸೂಕ್ತ ಭದ್ರತೆ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ, ಗೃಹ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಘುವೀರ್ ಸಿಂಗ್ , ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ , ವಿನೋದ್ , ಸುಮನ್, ಶಾರದಾ ಪಟೇಲ್, ನಾಗರಾಜ್, ಚಂದ್ರು, ಮಂಜು , ದಿನೇಶ್ , ಸತೀಶ್ ಸೇರಿದಂತೆ ಹಲವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…